-->
ಸಾವರ್ಕರ್, ಹೆಡಗೇವಾರ್, ಸೂಲಿಬೆಲೆ ಪಠ್ಯಗಳಿಗೆ ಕೊಕ್‌- ಅದರ ಬದಲಿಗೆ ಯಾವ ಪಾಠ ಗೊತ್ತೇ.?

ಸಾವರ್ಕರ್, ಹೆಡಗೇವಾರ್, ಸೂಲಿಬೆಲೆ ಪಠ್ಯಗಳಿಗೆ ಕೊಕ್‌- ಅದರ ಬದಲಿಗೆ ಯಾವ ಪಾಠ ಗೊತ್ತೇ.?

ಸಾವರ್ಕರ್, ಹೆಡಗೇವಾರ್, ಸೂಲಿಬೆಲೆ ಪಠ್ಯಗಳಿಗೆ ಕೊಕ್‌- ಅದರ ಬದಲಿಗೆ ಯಾವ ಪಾಠ ಗೊತ್ತೇ.?





ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಸ್ಥಾಪಕ ಕೇಶವ ಬಲಿರಾಂ ಹೆಡಗೇವಾರ್, ವಿನಾಯಕ ಸಾವರ್ಕರ್ ಕುರಿತ ಪಾಠಗಳು ಮತ್ತು ಚಕ್ರವರ್ತಿ ಸೂಲಿಬೆಲೆ ಬರೆದ ಪಾಠಗಳನ್ನು ಪಠ್ಯಕ್ರಮದಿಂದ ಕೈಬಿಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.



ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಲಪಂಥೀಯ ಚಿಂತಕ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಈ ವಿಷಯಗಳನ್ನು ಪಠ್ಯಕ್ರಮಕ್ಕೆ ಸೇರಿಸಲು ಶಿಫಾರಸ್ಸು ಮಾಡಿತ್ತು. ಈಗ ಅವನ್ನು ಹಿಂದಕ್ಕೆ ಪಡೆದು ಅದಕ್ಕೂ ಹಿಂದೆ ಇದ್ದ ಪಠ್ಯಗಳನ್ನು ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.



ಸಮಾಜ ಸುಧಾರಕರಾದ ಸಾವಿತ್ರಿಬಾಯಿ ಫುಲೆ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್, ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಾಹರ ಲಾಲ್ ನೆಹರೂ 'ಮಗಳಿಗೆ ಬರೆದ ಪತ್ರ'ದ ಪಾಠಗಳನ್ನು ಸೇರಿದಂತೆ ಪಠ್ಯ ಕ್ರಮಕ್ಕೆ ಮರು ಅಳವಡಿಸಲಾಗಿದೆ.



ಸೇತುಬಂಧ ಕಾರ್ಯಕ್ರಮ ಮುಗಿಯುವುದರೊಳಗಾಗಿ ಪೂರಕ ಪಠ್ಯದ ಭಾಗವ್ನು ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ತಲುಪಿಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.

.

Ads on article

Advertise in articles 1

advertising articles 2

Advertise under the article