
ಚೆಕ್ ಅಮಾನ್ಯ ಪ್ರಕರಣ: ದಂಡದ ಮೊತ್ತ ನಿಗದಿಪಡಿಸಲು ವಿಚಾರಣಾ ನ್ಯಾಯಾಲಯಕ್ಕೆ ಮಾರ್ಗಸೂಚಿ ಪ್ರಕಟಿಸಿದ ಕರ್ನಾಟಕ ಹೈಕೋರ್ಟ್
ಚೆಕ್ ಅಮಾನ್ಯ ಪ್ರಕರಣ: ದಂಡದ ಮೊತ್ತ ನಿಗದಿಪಡಿಸಲು ವಿಚಾರಣಾ ನ್ಯಾಯಾಲಯಕ್ಕೆ ಮಾರ್ಗಸೂಚಿ ಪ್ರಕಟಿಸಿದ ಕರ್ನಾಟಕ ಹೈಕೋರ್ಟ್
ಚೆಕ್ ಅಮಾನ್ಯ ಪ್ರಕರಣದಲ್ಲಿ ಆರೋಪ ಸಾಬೀತಾದಲ್ಲಿ ಫಿರ್ಯಾದಿಗೆ ಪರಿಹಾರವಾಗಿ ನೀಡಬೇಕಾದ ದಂಡದ ಮೊತ್ತ ನಿಗದಿಪಡಿಸಲು ಕರ್ನಾಟಕ ಹೈಕೋರ್ಟ್ ವಿಚಾರಣಾ ನ್ಯಾಯಾಲಯಗಳಿಗೆ ನೂತನ ಮಾರ್ಗಸೂಚಿಯನ್ನು ಪ್ರಕಟಿಸಿದೆ.
ಕರ್ನಾಟಕ ಹೈಕೋರ್ಟ್ನ ಜೆ.ಎಂ. ಖಾಜಿ ಅವರಿದ್ದ ಏಕಸದಸ್ಯ ನ್ಯಾಯಪೀಠ "ಎ.ವಿ. ಪೂಜಪ್ಪ Vs ಡಾ. ಎಸ್.ಕೆ. ವಾಗ್ದೇವಿ" ಪ್ರಕರಣದಲ್ಲಿ ಈ ಮಾರ್ಗಸೂಚಿ ಪ್ರಕಟಿಸಿದೆ.
ಕರ್ನಾಟಕ ಉಚ್ಚ ನ್ಯಾಯಾಲಯವು ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಕಾಯ್ದೆಯಡಿ, ಚೆಕ್ ಅಮಾನ್ಯ ಪ್ರಕರಣಗಳಲ್ಲಿ ಅಪರಾಧಿಗೆ ದಂಡದ ಮೊತ್ತವನ್ನು ನಿಗದಿಪಡಿಸುವಾಗ ವಿಚಾರಣಾ ಮತ್ತು ಸತ್ರ ನ್ಯಾಯಾಲಯಗಳು ನೆನಪಿನಲ್ಲಿಟ್ಟುಕೊಳ್ಳಬೇಕಾದ ಮಾರ್ಗಸೂಚಿಗಳನ್ನು ನೀಡಿದೆ.
ನ್ಯಾಯಾಲಯವು ಪರಿಗಣಿಸಬೇಕಾದ ಅಂಶಗಳು ಈ ಕೆಳಗಿನಂತಿವೆಃ
1. ಪ್ರಕರಣದಲ್ಲಿ ಫಿರ್ಯಾದಿಯು ಆಪಾದಿತನಿಗೆ ನೀಡಿರುವ ಸಾಲದ ಮೊತ್ತ.
2. ಪ್ರಕರಣದಲ್ಲಿ ಆಪಾದಿತನು ತೆಗೆದುಕೊಂಡ ಅಭಿರಕ್ಷೆ/ಪ್ರತಿವಾದ, ಈ ಪ್ರತಿವಾದವನ್ನು ಮಂಡಿಸುವಾಗದ ಅವನು ಸುಳ್ಳು ಪ್ರತಿವಾದವನ್ನು ತೆಗೆದುಕೊಂಡಿದ್ದಾನೆಯೇ ಮತ್ತು ಅದನ್ನು ಸಾಬೀತುಪಡಿಸಲು ವಿಫಲನಾಗಿದ್ದಾನೆಯೇ ಎಂಬುದನ್ನು ವಿಶೇಷವಾಗಿ ಗಮನಿಸುವುದು.
3. ಆರೋಪಿಯು ಈ ಪ್ರಕರಣದ ವಿಚಾರಣೆಯನ್ನು ಅನಗತ್ಯವಾಗಿ ವಿಳಂಬ ಮಾಡಲು ಕಾರಣವಾಗಿದ್ದಾನೆಯೇ ಮತ್ತು ಆ ಮೂಲಕ ವಿಚಾರಣೆ, ಮೇಲ್ಮನವಿ, ಪರಿಷ್ಕರಣೆ ಮತ್ತು ಸರ್ವೋಚ್ಚ ನ್ಯಾಯಾಲಯದ ಮುಂದೆ ಪ್ರಕರಣದ ಇತ್ಯರ್ಥವನ್ನು ವಿಳಂಬಗೊಳಿಸಿದ್ದಾನೆಯೇ ಎಂಬ ಅಂಶವನ್ನೂ ಗಮನಿಸುವುದು.
4. ವ್ಯವಹಾರವು ಪಕ್ಷಗಾರರುಗಳ ನಡುವಿನ ವ್ಯವಹಾರಕ್ಕೆ ಸಂಬಂಧಿಸಿರಲಿ ಅಥವಾ ವ್ಯಾಪಾರ ವರ್ಗದವರಾಗಿರಲಿ, ಅವರು ಆ ಮೊತ್ತವನ್ನು ತಮ್ಮ ವ್ಯವಹಾರಕ್ಕಾಗಿ ಬಳಸಿಕೊಂಡಿದ್ದಾರೆಯೇ ಮತ್ತು ಅದರಿಂದ ಅಭಿವೃದ್ಧಿ ಹೊಂದಿದ್ದಾರೆಯೇ ಎಂಬ ಅಂಶಗಳು.
5. ಇತರ ಸಂದರ್ಭಗಳಲ್ಲಿ, ಸಾಲದ ಮೊತ್ತವನ್ನು ರಾಷ್ಟ್ರೀಕೃತ ಬ್ಯಾಂಕ್ ಇತ್ಯಾದಿಗಳಲ್ಲಿ ಸ್ಥಿರ ಠೇವಣಿಯಲ್ಲಿ ಇರಿಸಿದ್ದರೇ ಎಂಬ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ದಂಡದ ಪ್ರಮಾಣವನ್ನು ನಿಗದಿಪಡಿಸಬೇಕು ಎಂಬುದಾಗಿ ಕರ್ನಾಟಕ ಹೈಕೋರ್ಟ್ನ ಗೌರವಾನ್ವಿತ ನ್ಯಾಯಪೀಠವು ಮಾರ್ಗಸೂಚಿಗಳನ್ನು ನೀಡಿದೆ.
ಎ.ವಿ. ಪೂಜಪ್ಪ Vs ಡಾ. ಎಸ್.ಕೆ. ವಾಗ್ದೇವಿ
ಕರ್ನಾಟಕ ಹೈಕೋರ್ಟ್, Crl.R.P 13/2020 Dated 4-06-2025