
ಮಹಿಳಾ ಅಧಿಕಾರಿಯನ್ನು ಸೇವೆಯಿಂದ ಬಿಡುಗಡೆ ಮಾಡದಿರಿ: ಸುಪ್ರೀಂ ಸೂಚನೆ
ಮಹಿಳಾ ಅಧಿಕಾರಿಯನ್ನು ಸೇವೆಯಿಂದ ಬಿಡುಗಡೆ ಮಾಡದಿರಿ: ಸುಪ್ರೀಂ ಸೂಚನೆ
ಖಾಯಂ ನೇಮಕಾತಿ ಅರ್ಜಿ ನಿರಾಕರಿಸಲಾಗಿದ್ದ ಮಹಿಳಾ ಅಧಿಕಾರಿಯನ್ನು ಸೇವೆಯಿಂದ ಬಿಡುಗಡೆ ಮಾಡಬೇಡಿ ಎಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರ ಮತ್ತು ಭಾರತೀಯ ವಾಯುಪಡೆಗೆ ಸೂಚನೆ ನೀಡಿದೆ .
ಸುಪ್ರೀಂಕೋರ್ಟ್ ನ ನ್ಯಾಯಮೂರ್ತಿಗಳಾದ ಶ್ರೀ ಉಜ್ವಲ್ ಭುಯಾನ್ ಮತ್ತು ಮನಮೋಹನ್ ಅವರಿದ್ದ ನ್ಯಾಯಪೀಠ ಈ ನಿರ್ದೇಶನ ಹೊರಡಿಸಿದೆ.
ಭಾರತೀಯ ವಾಯುಪಡೆಯ ಅಧಿಕಾರಿ ಕವಿತಾ ಅವರನ್ನು ಖಾಯಂ ನೇಮಕಾತಿ ಮಾಡಿಕೊಳ್ಳಲು ಕೇಂದ್ರ ಸರಕಾರ ಮತ್ತು ಭಾರತೀಯ ವಾಯುಪಡೆ ನಿರಾಕರಿತ್ತು.
ಅನಗತ್ಯ ಕಾರಣಗಳಿಂದ ತಮ್ಮ ನೇಮಕಾತಿಯನ್ನು ಖಾಯಂ ಮಾಡದ ಕುರಿತು ಮಹಿಳಾ ಅಧಿಕಾರಿ ಕವಿತಾ ಅವರು ಆಕ್ಷೇಪ ವ್ಯಕ್ತಪಡಿಸಿ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದರು. ಅವರ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಪೀಠ ಕೇಂದ್ರ ಸರಕಾರಕ್ಕೆ ಮತ್ತು ಭಾರತೀಯ ವಾಯುಪಡೆಗೆ ಈ ಸೂಚನೆ ನೀಡಿದೆ.
ಖಾಯಂ ನೇಮಕಾತಿ ಅರ್ಜಿ ನಿರಾಕರಿಸಲಾಗಿದ್ದ ಮಹಿಳಾ ಅಧಿಕಾರಿ ಕವಿತಾ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡದಂತೆ ಸುಪ್ರೀಂ ಕೋರ್ಟ್ ತನ್ನ ಮಧ್ಯಂತರ ಆದೇಶದಲ್ಲಿ ಸರ್ಕಾರ ಮತ್ತು ಸೇವೆಗೆ ನಿರ್ದೇಶನ ನೀಡಿದೆ.