-->
ಅಪರೂಪದ ಸಂದರ್ಭದಲ್ಲಿ ಮಾತ್ರ ಮಹಿಳೆಗೆ ಗಂಡನ ಜಾತಿಯ ಸ್ಥಾನಮಾನ: ಕರ್ನಾಟಕ ಹೈಕೋರ್ಟ್‌

ಅಪರೂಪದ ಸಂದರ್ಭದಲ್ಲಿ ಮಾತ್ರ ಮಹಿಳೆಗೆ ಗಂಡನ ಜಾತಿಯ ಸ್ಥಾನಮಾನ: ಕರ್ನಾಟಕ ಹೈಕೋರ್ಟ್‌

ಅಪರೂಪದ ಸಂದರ್ಭದಲ್ಲಿ ಮಾತ್ರ ಮಹಿಳೆಗೆ ಗಂಡನ ಜಾತಿಯ ಸ್ಥಾನಮಾನ: ಕರ್ನಾಟಕ ಹೈಕೋರ್ಟ್‌





ಮದುವೆಯ ಕಾರಣಕ್ಕೆ ಗಂಡನ ಜಾತಿಯು ಪತ್ನಿಗೆ ವರ್ಗಾವಣೆ ಆಗುವುದಿಲ್ಲ. ಅದರಲ್ಲೂ ಚುನಾವಣಾ ವಿಚಾರಗಳಲ್ಲಿ ಇಂತಹ ಅಂಶಗಳನ್ನು ಪರಿಗಣಿಸಲಾಗದು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.


"ಅರ್ಚನಾ ಎಂ.ಜಿ. Vs ಶ್ರೀಮತಿ ಅಭಿಲಾಶ ಮತ್ತಿತರರು" ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಹತ್ವದ ತೀರ್ಪನ್ನು ಪ್ರಕಟಿಸಿದೆ.


ಮಹಾಭಾರತದ "ದೈವ ಯತ್ನಂ ಕುಲೇ ಜನ್ಮ... ಪುರುಷ ಯತ್ನಂ ಪೌರುಷಂ" ಎಂಬ ಉದ್ದರಣೆಯನ್ನು ಉಲ್ಲೇಖಿಸಿದ ನ್ಯಾಯಪೀಠ, ಸಾಮಾನ್ಯವಾಗಿ ತಂದೆಯ ಜಾತಿ ಮಕ್ಕಳಿಗೆ ಬರುತ್ತದೆ. ಅಪರೂಪದ ಸಂದರ್ಭದಲ್ಲಿ ಮಾತ್ರ ಪತಿಯ ಜಾತಿಯ ಸ್ಥಾನಮಾನ ವಿವಾಹವಾದ ಬಳಿಕ ಸಾಮಾಜಿಕವಾಗಿ ಅಂಗೀಕರಿಸುವ ಮೂಲಕ ಮಹಿಳೆಗೆ ಬರುತ್ತದೆ ಎಂದು ತೀರ್ಪಿನಲ್ಲಿ ಹೇಳಿದೆ.


ಜ್ಯೋತಿ ಬಸು Vs ದೇಬಿ ಪ್ರಸಾದ್ ಘೋಷಲ್ (AIR 1982 SC 983) ಪ್ರಕರಣವನ್ನು ಅವಲಂಬಿಸಿದ ಪ್ರತಿವಾದಿ ಪರ ವಕೀಲರು, ಚುನಾವಣಾ ವಿಚಾರದಲ್ಲಿ ಸಾಮಾನ್ಯ ಕಾನೂನನ್ನು ಪರಿಗಣನೆಗೆ ತೆಗೆದುಕೊಳ್ಳಬಾರದು. ಅಲ್ಲದೆ, ಪಕ್ಷಕಾರರಾದ ಮಹಿಳೆ ಒಬ್ಬ ಸಾಮಾನ್ಯ ವ್ಯಕ್ತಿಯಲ್ಲ. ಅವರೊಬ್ಬ ಜವಾಬ್ದಾರಿಯುತ ಜನಪ್ರತಿನಿಧಿ ಎಂದು ನ್ಯಾಯಪೀಠ ವಿಶ್ಲೇಷಿಸಿತು.


ಅಪರೂಪದ ಸಂದರ್ಭದಲ್ಲಿ ಮಾತ್ರ ಮಹಿಳೆಯು ಗಂಡನ ಜಾತಿಯ ಸ್ಥಾನಮಾನ ಪಡೆಯುತ್ತಾಳೆ. ವಿವಾಹವಾದ ಬಳಿಕ ಸಾಮಾಜಿಕವಾಗಿ ಅಂಗೀಕರಿಸುವ ಮೂಲಕ ಮಹಿಳೆ ಗಂಡನ ಸಮುದಾಯಕ್ಎಕ ಸೇರುತ್ತಾರೆ. ಆದರೆ, ಇಂತಹ ತತ್ವವನ್ನು ಚುನಾವಣಾ ವಿಚಾರಗಳಲ್ಲಿ ಪರಿಗಣಿಸಲಾಗದು ಎಂದು ನ್ಯಾಯಪೀಠ ತೀರ್ಪಿನಲ್ಲಿ ಹೇಳಿತು.


ಜಾತಿ ಪ್ರಮಾಣಪತ್ರದ ಲೋಪದ ಕುರಿತಂತೆ ನೀಡಿದ್ದ ದೂರಿನ ವಿಚಾರಣೆ ವೇಳೆ ತನಗೆ ವಾದ ಮಂಡಿಸಲು ಅವಕಾಶ ನೀಡಿಲ್ಲ ಎಂದು ಅರ್ಚನಾ ವಾದಿಸಿದ್ದಾರೆ. ಆದರೆ, ಹಲವು ಅವಕಾಶ ನೀಡಿದ್ದರೂ ಅವರು ವಿಚಾರಣೆಗೆ ಹಾಜರಾಗಿಲ್ಲ ಎಂಬುದು ದಾಖಲೆಗಳಿಂದ ಸ್ಪಷ್ಟವಾಗುತ್ತದೆ. ಈ ವಿಚಾರದಲ್ಲಿ ನ್ಯಾಯಾಲಯ ಉದಾರತೆಯನ್ನುತೋರಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿತು.


ಪ್ರಕರಣ: ಅರ್ಚನಾ ಎಂ.ಜಿ. Vs ಶ್ರೀಮತಿ ಅಭಿಲಾಶ ಮತ್ತಿತರರು

ಕರ್ನಾಟಕ ಹೈಕೋರ್ಟ್ WP 3399/2022 Dated 15-03-2022


Ads on article

Advertise in articles 1

advertising articles 2

Advertise under the article