![ರಾಜ್ಯ ಸರ್ಕಾರದ ಅಧಿಸೂಚನೆಗೆ ವಿರೋಧ: ಮಂಗಳೂರಿನಲ್ಲಿ ಶಾಸಕರಿಗೆ ವಕೀಲರ ಮನವಿ ಪತ್ರ ರಾಜ್ಯ ಸರ್ಕಾರದ ಅಧಿಸೂಚನೆಗೆ ವಿರೋಧ: ಮಂಗಳೂರಿನಲ್ಲಿ ಶಾಸಕರಿಗೆ ವಕೀಲರ ಮನವಿ ಪತ್ರ](https://blogger.googleusercontent.com/img/b/R29vZ2xl/AVvXsEhER5f7m-NfkLKY1feC1VJvokTB-6XYlhVPlrzniYA_UVv4qk-vb6vK3EjH78sqcOc-ie3QL-gZQSE6dy1f4-VZvsqI8UvX9d9wM9qpbEwX14z6-2gSAxA6dHs9kjRSgo0f_E8BJDO7bQ2eT7dRbOqRYRdL3ctXizEMS2TKwf9LKQiRUUnUTQieffg5-A/w640-h348/Karnataka%20Assembly.jpg)
ರಾಜ್ಯ ಸರ್ಕಾರದ ಅಧಿಸೂಚನೆಗೆ ವಿರೋಧ: ಮಂಗಳೂರಿನಲ್ಲಿ ಶಾಸಕರಿಗೆ ವಕೀಲರ ಮನವಿ ಪತ್ರ
ರಾಜ್ಯ ಸರ್ಕಾರದ ಅಧಿಸೂಚನೆಗೆ ವಿರೋಧ: ಮಂಗಳೂರಿನಲ್ಲಿ ಶಾಸಕರಿಗೆ ವಕೀಲರ ಮನವಿ ಪತ್ರ
ಜನನ ಹಾಗೂ ಮರಣ ನೋಂದಣಿಗೆ ಸಂಬಂಧಿಸಿದ ಪ್ರಕರಣಗಳನ್ನು ಜೆಎಂಎಫ್ಸಿ ನ್ಯಾಯಾಲಯದಿಂದ ಉಪವಿಭಾಗಾಧಿಕಾರಿ ಕೋರ್ಟ್ಗೆ ವರ್ಗಾಯಿಸುವ ರಾಜ್ಯ ಸರ್ಕಾರದ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಕಂದಾಯ ಇಲಾಖೆಯಲ್ಲಿ ತಾಂಡವಾಗುತ್ತಿರುವ ಭ್ರಷ್ಟಾಚಾರಕ್ಕೆ ಈ ಅಧಿಸೂಚನೆ ಮತ್ತಷ್ಟು ಕುಮ್ಮಕ್ಕು ಕೊಡುತ್ತದೆ. ಮಾತ್ರವಲ್ಲದೆ, ಸಾವಿರಾರು ವಕೀಲರ ವೃತ್ತಿಗೆ ಕೊಡಲಿಯೇಟು ನೀಡಲಿದೆ ಎಂದು ವಕೀಲರು ಅಭಿಪ್ರಾಯಪಟ್ಟಿದ್ದಾರೆ.
ಮಂಗಳೂರು ವಕೀಲರ ಸಂಘವೂ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ. ಸರ್ಕಾರದ ಈ ನಿರ್ಧಾರವನ್ನು ವಾಪಸ್ ಪಡೆಯುವಂತೆ ಮಂಗಳೂರು ವಕೀಲರ ಸಂಘ ಒತ್ತಾಯಿಸಿದೆ.
ಈ ನಿಟ್ಟಿನಲ್ಲಿ ಮಂಗಳೂರಿನ ವಕೀಲರ ನಿಯೋಗ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ವೇದವ್ಯಾಸ ಕಾಮತ್ ಅವರನ್ನು ಭೇಟಿ ಮಾಡಿ ಮನವಿ ಅರ್ಪಿಸಿದೆ.
ಕೂಡಲೇ ಅಧಿಸೂಚನೆಯನ್ನು ಹಿಂಪಡೆಯುವಂತೆ ಸರ್ಕಾರವನ್ನು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.
ಮಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ಪೃಥ್ವಿರಾಜ್ ರೈ, ಪ್ರಧಾನ ಕಾರ್ಯದರ್ಶಿ ಶ್ರೀಧರ ಎಣ್ಮಕಜೆ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಮತ್ತು ವಕೀಲರು ನಿಯೋಗದಲ್ಲಿ ಇದ್ದರು.