![ಲೋಕಾಯುಕ್ತಕ್ಕೆ ಬಲ ನೀಡಿ ಎಸಿಬಿ ರದ್ದುಪಡಿಸಿದ ಕರ್ನಾಟಕ ಹೈಕೋರ್ಟ್: ಭ್ರಷ್ಟಾಚಾರದ ವಿರುದ್ಧ ಪ್ರಬಲ ಸಂಸ್ಥೆ ಬೇಕು ಎಂದ ನ್ಯಾಯಪೀಠ ಲೋಕಾಯುಕ್ತಕ್ಕೆ ಬಲ ನೀಡಿ ಎಸಿಬಿ ರದ್ದುಪಡಿಸಿದ ಕರ್ನಾಟಕ ಹೈಕೋರ್ಟ್: ಭ್ರಷ್ಟಾಚಾರದ ವಿರುದ್ಧ ಪ್ರಬಲ ಸಂಸ್ಥೆ ಬೇಕು ಎಂದ ನ್ಯಾಯಪೀಠ](https://blogger.googleusercontent.com/img/b/R29vZ2xl/AVvXsEjQ5Es13wUKprqIzTPnXHNKLvCVGolvEhiC5mYRnsrCpmzzDrzOhb_6auj5afTvlxklI0Nej26oC5BCSVulEOjo8Qv0-xL4XAg0VsEar6jazmQicqlvn9DKmH0OrcIu9Fmgs2-T9diwQ3Z0WWnmbXhsMLpmLA9mZ8qUmBnAwGNZWPVgNY_j5WTdJiSnqw/w640-h552/Seal_of_Karnataka.png)
ಲೋಕಾಯುಕ್ತಕ್ಕೆ ಬಲ ನೀಡಿ ಎಸಿಬಿ ರದ್ದುಪಡಿಸಿದ ಕರ್ನಾಟಕ ಹೈಕೋರ್ಟ್: ಭ್ರಷ್ಟಾಚಾರದ ವಿರುದ್ಧ ಪ್ರಬಲ ಸಂಸ್ಥೆ ಬೇಕು ಎಂದ ನ್ಯಾಯಪೀಠ
ಲೋಕಾಯುಕ್ತಕ್ಕೆ
ಬಲ ನೀಡಿ ಎಸಿಬಿ ರದ್ದುಪಡಿಸಿದ ಕರ್ನಾಟಕ ಹೈಕೋರ್ಟ್: ಭ್ರಷ್ಟಾಚಾರದ ವಿರುದ್ಧ ಪ್ರಬಲ ಸಂಸ್ಥೆ ಬೇಕು
ಎಂದ ನ್ಯಾಯಪೀಠ
ಮಹತ್ವದ ಬೆಳವಣಿಗೆಯೊಂದರಲ್ಲಿ
ಕರ್ನಾಟಕ ಹೈಕೋರ್ಟ್ ತೀರ್ಪೊಂದನ್ನು ಪ್ರಕಟಿಸಿದ್ದು, ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ವನ್ನು ರದ್ದುಪಡಿಸಿ
ಆದೇಶ ಹೊರಡಿಸಿದೆ. ಅದಕ್ಎಕ ಸಂಬಂಧಿಸಿದ ಎಲ್ಲ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವರ್ಗಾಯಿಸುವಂತೆ ಆದೇಶದಲ್ಲಿ
ತಿಳಿಸಿದೆ.
ರಾಜ್ಯದಲ್ಲಿ
ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ವನ್ನು ರಚಿಸಿರುವ ರಾಜ್ಯ ಸರ್ಕಾರದ ಆದೇಶವನ್ನು ರದ್ದುಪಡಿಸಿರುವ
ಕರ್ನಾಟಕ ಹೈಕೋರ್ಟ್ ನ್ಯಾ. ಬಿ. ವೀರಪ್ಪ ಹಾಗೂ ನ್ಯಾ. ಕೆ. ಎಸ್. ಹೇಮಲೇಖಾ ಅವರನ್ನೊಳಗೊಂಡ ನ್ಯಾಯಪೀಠ,
ಎಸಿಬಿಯನ್ನು ಲೋಕಾಯುಕ್ತ ವ್ಯಾಪ್ತಿಗೆ ನೀಡುವಂತೆ ಆದೇಶ ನೀಡಿದೆ.
ಈ ಆದೇಶದ ಹಿನ್ನೆಲೆಯಲ್ಲಿ,
ಇನ್ನು ಮುಂದೆ, ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಗೆ ಪೊಲೀಸ್ ಠಾಣೆ ಸ್ಥಾನಮಾನ ಇರುವುದಿಲ್ಲ. ಎಸಿಬಿ
ಅಧಿಕಾರ ವ್ಯಾಪ್ತಿಯಲ್ಲಿ ದಾಖಲಾಗಿರುವ ಎಲ್ಲಾ ಪ್ರಕರಣಗಳು ಲೋಕಾಯುಕ್ತಕ್ಕೆ ವರ್ಗಾವಣೆ ಆಗಲಿದೆ.
“ಕರ್ನಾಟಕ
ಲೋಕಾಯುಕ್ತ ಕಾಯ್ದೆ”ಯಲ್ಲಿ ತಿದ್ದುಪಡಿ ಮಾಡುವ ಅಗತ್ಯವಿದೆ ಎಂದು ಹೈಕೋರ್ಟ್ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಲೋಕಾಯುಕ್ತಕ್ಕೆ ನೇಮಕಗೊಳ್ಳುವ ಅಧಿಕಾರಿಗಳನ್ನು ಕೇವಲ ಮೂರು ವರ್ಷಗಳ ಅವಧಿಗೆ ನೇಮಕ ಮಾಡಬೇಕು. “ಲೋಕಾಯುಕ್ತ”ರ
ನೇಮಕ ಮಾಡುವ ಸಂದರ್ಭದಲ್ಲಿ ಅವರ ಅರ್ಹತೆ ಮಾನದಂಡ ಮಾತ್ರ ಪರಿಗಣಿಸಬೇಕು. ಬದಲಾಗಿ, ಜಾತಿ ಆಧಾರದಲ್ಲಿ
ನೇಮಕವಾಗಬಾರದು ಎಂದು ನ್ಯಾಯಪೀಠ ಹೇಳಿದೆ. ಭ್ರಷ್ಟಾಚಾರದ ಆರೋಪ ಹೊತ್ತವರು, ಕಳಂಕಿತರು ಕಾನೂನಿನ ಪ್ರಕ್ರಿಯೆಯಿಂದ
ಯಾವುದೇ ಕಾರಣಕ್ಕೂ ಪಾರಾಗುವ ಸ್ಥಿತಿ ಬರಬಾರದು. ಈ ಕಾರಣಕ್ಕೆ ಲೋಕಾಯುಕ್ತ ಪೊಲೀಸರೇ ಪ್ರಕರಣದ ತನಿಖೆ
ಮುಂದುವರೆಸಬೇಕು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಭ್ರಷ್ಟಾಚಾರದ
ವಿರುದ್ಧ ಪ್ರಬಲ ಹೋರಾಟ ರೂಪುಗೊಳ್ಳಲು, ಕರ್ನಾಟಕದಲ್ಲಿ ಲೋಕಾಯುಕ್ತವನ್ನು ಬಲವರ್ಧನೆ ಮಾಡಬೇಕಿದೆ.
ಈ ಕಾರಣಕ್ಕೆ ಎಸಿಬಿಯನ್ನು ವಜಾಗೊಳಿಸಿರುತ್ತೇವೆ ಎಂದು ಹೇಳಿರುವ ನ್ಯಾಯಪೀಠ, ಈ ಐತಿಹಾಸಿಕ ಮಹತ್ವದ
ತೀರ್ಪು ಪ್ರಕಟಿಸಿದೆ.