![ಜನನ-ಮರಣ ನೋಂದಣಿ ತಿದ್ದುಪಡಿ: ಸರ್ಕಾರಿ ಆದೇಶಕ್ಕೆ ತಡೆ ನೀಡಿದ ಕರ್ನಾಟಕ ಹೈಕೋರ್ಟ್ ಜನನ-ಮರಣ ನೋಂದಣಿ ತಿದ್ದುಪಡಿ: ಸರ್ಕಾರಿ ಆದೇಶಕ್ಕೆ ತಡೆ ನೀಡಿದ ಕರ್ನಾಟಕ ಹೈಕೋರ್ಟ್](https://blogger.googleusercontent.com/img/b/R29vZ2xl/AVvXsEi9buahXl7hdJJuhkGgNKKYnhpM3Lgxnlt0Jt6rkL_ujXsuAyhpijqJ7GGE4SDCMxrFfRiay-ZY2iz8RI3XTpYPkLx-I3kijg0qGeltyyPvefVUln25T1NdbgxiR0BlRL1ATP92MK7lO7tzXKvDe5ljYleqYb2Hd23sLMdKXsFiS4f1DO8QzlMTkC2MyA/w640-h352/1234.jpg)
ಜನನ-ಮರಣ ನೋಂದಣಿ ತಿದ್ದುಪಡಿ: ಸರ್ಕಾರಿ ಆದೇಶಕ್ಕೆ ತಡೆ ನೀಡಿದ ಕರ್ನಾಟಕ ಹೈಕೋರ್ಟ್
ಜನನ-ಮರಣ ನೋಂದಣಿ ತಿದ್ದುಪಡಿ: ಸರ್ಕಾರಿ ಆದೇಶಕ್ಕೆ ತಡೆ ನೀಡಿದ ಕರ್ನಾಟಕ ಹೈಕೋರ್ಟ್
ಮಹತ್ವದ ಬೆಳವಣಿಗೆಯೊಂದರಲ್ಲಿ ಜನನ-ಮರಣ ನೋಂದಣಿ ಕಾಯ್ದೆಗೆ ತಿದ್ದುಪಡಿ ಮಾಡಿರುವ ಸರ್ಕಾರಿ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ.
ಚಿಂಚೋಳಿ ವಕೀಲರ ಸಂಘದ ಅಧ್ಯಕ್ಷ ಸುದರ್ಶನ ಬಿರಾದಾರ್ ಅವರು ಸಲ್ಲಿಸಿದ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾ. ಕೃಷ್ಣ ದೀಕ್ಷಿತ್ ನೇತೃತ್ವದ ನ್ಯಾಯಪೀಠ ಈ ಮಹತ್ವದ ಆದೇಶ ಹೊರಡಿಸಿದೆ.
ಪ್ರಕರಣ: ಸುದರ್ಶನ ಬಿರಾದರ್ Vs ಕರ್ನಾಟಕ (ಕರ್ನಾಟಕ ಹೈಕೋರ್ಟ್)
ಕರ್ನಾಟಕ ರಾಜ್ಯ ಸರ್ಕಾರ ದಿನಾಂಕ 18-07-2022ರಂದು ಅಧಿಸೂಚನೆ ಹೊರಡಿಸಿ ಜನನ ಮತ್ತು ಮರಣ ನೋಂದಣಿ ತಿದ್ದುಪಡಿಗೆ ಸಂಬಂಧಿಸಿದ ನ್ಯಾಯಾಂಗದ ವ್ಯಾಪ್ತಿಯನ್ನು ಬದಲಾವಣೆ ಮಾಡಿತ್ತು.
ರಾಜ್ಯದಲ್ಲಿ ಜನನ, ಮರಣ ನೋಂದಣಿ ತಿದ್ದುಪಡಿಗೆ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ (JMFC) ನ್ಯಾಯಾಲಯದ ವ್ಯಾಪ್ತಿಯಲ್ಲಿ ಇತ್ತು. ಆದರೆ, ಸರ್ಕಾರಿ ಅಧಿಸೂಚನೆ ಪ್ರಕಾರ, ಈ ತಿದ್ದುಪಡಿಯ ನ್ಯಾಯವ್ಯಾಪ್ತಿಯನ್ನು ಉಪ ವಿಭಾಗಾಧಿಕಾರಿ ನ್ಯಾಯಾಲಯ (ಎಸಿ ಕೋರ್ಟ್)ಕ್ಕೆ ನೀಡಲಾಗಿತ್ತು.
ಈ ಬಗ್ಗೆ ರಾಜ್ಯವ್ಯಾಪಿ ವಕೀಲರ ಸಮುದಾಯದಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಮೈಸೂರು, ಮಂಗಳೂರು ಸೇರಿದಂತೆ ಎಲ್ಲೆಡೆ ವಕೀಲರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು.
ಇದನ್ನೂ ಓದಿ:
ಜನನ ಮರಣ ನೋಂದಣಿ ತಿದ್ದುಪಡಿ: ಜೆಎಂಎಫ್ಸಿ ನ್ಯಾಯಾಲಯದ ಬದಲು ಎಸಿ ಕೋರ್ಟ್ ವ್ಯಾಪ್ತಿಗೆ