![ಸ್ಮಾರ್ತೃ ಬ್ರಾಹ್ಮಣರು ಅಲ್ಪಸಂಖ್ಯಾತರಲ್ಲ: ಸುಪ್ರೀಂ ಕೋರ್ಟ್ ಸ್ಮಾರ್ತೃ ಬ್ರಾಹ್ಮಣರು ಅಲ್ಪಸಂಖ್ಯಾತರಲ್ಲ: ಸುಪ್ರೀಂ ಕೋರ್ಟ್](https://blogger.googleusercontent.com/img/b/R29vZ2xl/AVvXsEix6t68puGE19R-W1jur616yTZfB6MKxC8Qvk_Ggcg7P0c9RUg9MUDkdx5QZ5EAnDnasmvQdDVRCgpM7hW1rpM0H96NgOZRtIZRyAHDTDBRbiGPUXdBtbRRcircH84ZgzNBB3BwlQcHuwMcIsw6dtzzhVIkaRhLzezeSug_OnwwgYKnEyE9SU_SWWJGEQ/w640-h426/Law%20Legal%20Court%20(1).jpg)
ಸ್ಮಾರ್ತೃ ಬ್ರಾಹ್ಮಣರು ಅಲ್ಪಸಂಖ್ಯಾತರಲ್ಲ: ಸುಪ್ರೀಂ ಕೋರ್ಟ್
ಸ್ಮಾರ್ತೃ ಬ್ರಾಹ್ಮಣರು ಅಲ್ಪಸಂಖ್ಯಾತರಲ್ಲ: ಸುಪ್ರೀಂ ಕೋರ್ಟ್
ಅದ್ವೈತ ತತ್ವ ಅನುಸರಿಸುವ ಸ್ಮಾರ್ತ ಬ್ರಾಹ್ಮಣರನ್ನು ಅಲ್ಪಸಂಖ್ಯಾತರು ಎಂದು ಘೋಷಿಸಿ ಅವರು ಅಲ್ಪಸಂಖ್ಯಾತರ ಸ್ಥಾನಮಾನ ನೀಡಬೇಕು ಎಂಬ ಸ್ಮಾರ್ತ ಬ್ರಾಹ್ಮಣರ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ತಮ್ಮನ್ನು ಪ್ರತ್ಯೇಕ ಧಾರ್ಮಿಕ ಪಂಗಡವಾಗಿ ಪರಿಗಣಿಸಿ ತಮಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಬೇಕೆಂಬ ಮನವಿಯನ್ನು ಈ ಹಿಂದೆ ಮದ್ರಾಸ್ ಹೈಕೋರ್ಟ್ ತಿರಸ್ಕರಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಸ್ಮಾರ್ತೃ ಬ್ರಾಹ್ಮಣರ ಸಮುದಾಯ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ಸದ್ರಿ ಈ ಮನವಿಯನ್ನು ಪುರಸ್ಕರಿಸಿದರೆ, "ನಾವು ಅಲ್ಪಸಂಖ್ಯಾತರ ದೇಶವಾಗಲಿದ್ದೇವೆ," ಏಕೆಂದರೆ ಅದ್ವೈತ ತತ್ವದ ಅನುಯಾಯಿಗಳು ಅನೇಕರಿದ್ದಾರೆ ಎಂದು ಇದೇ ವೇಳೆ ಪೀಠ ಹೇಳಿತು.
ಒಂದು ಜಾತಿ/ ಸಮುದಾಯವಾಗಿ ಸ್ಮಾರ್ತ ಬ್ರಾಹ್ಮಣರು ಗುರುತಿಸಿಕೊಂಡಿದ್ದಾರೆ. ಅವರನ್ನು ಇತರ ಬ್ರಾಹ್ಮಣರಿಂದ ಪ್ರತ್ಯೇಕಿಸಲಾಗದು ಮತ್ತು ಅಂತಹ ಪ್ರತ್ಯೇಕತೆಯ ಅಸ್ತಿತ್ವ ಈ ಸಮುದಾಯಕ್ಕಿಲ್ಲ ಎಂದು ನ್ಯಾಯಪೀಠ ಹೇಳಿತ್ತು.