
ಕರ್ನಾಟಕದ ನೂತನ ಅಡ್ವಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ನೇಮಕ
ಕರ್ನಾಟಕದ ನೂತನ ಅಡ್ವಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ನೇಮಕ
ರಾಜ್ಯದ ನೂತನ ಅಡ್ವಕೇಟ್ ಜನರಲ್ ಆಗಿ ಕರ್ನಾಟಕದ ಹಿರಿಯ ನ್ಯಾಯವಾದಿ ಶಶಿಕಿರಣ್ ಶೆಟ್ಟಿ ಅವರು ನೇಮಕವಾಗಿದ್ದಾರೆ.
ಕಳೆದ 23 ವರ್ಷಗಳಿಂದ ಸುದೀರ್ಘ ಕಾನೂನು ಸೇವೆಯಲ್ಲಿ ತೊಡಗಿಸಿಕೊಂಡಿರುವ ಇವರು ವಿಶ್ರಾಂತ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಅವರು ಪುತ್ರ.
ಬೆಂಗಳೂರಿನ ಭಾರತೀಯ ವಿಶ್ವವಿದ್ಯಾನಿಲಯ ರಾಷ್ಟ್ರೀಯ ಕಾನೂನು ವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದಿದ್ದಾರೆ.
ಸಾಂವಿಧಾನಿಕ, ಆಡಳಿತಾತ್ಮಕ ಕಾನೂನುಗಳು, ಮಧ್ಯಸ್ಥಿಕೆ, ಆಸ್ತಿ ಹಕ್ಕು, ಕೌಟುಂಬಿಕ, ಸಾಲ ವಸೂಲಾತಿ, ಗಣಿಗಾರಿಕೆ, ಪರಿಸರ, ಬ್ಯಾಂಕಿಂಗ್ ಮೊದಲಾದ ಕಾನೂನುಗಳಲ್ಲಿ ಕೌಶಲ್ಯತೆ ಮತ್ತು ಪರಿಣತಿಯನ್ನು ಮೆರೆದಿರುವ ಶಶಿಕಾಂತ್ ಶೆಟ್ಟಿ ಹಲವು ಪ್ರಕರಣಗಳಲ್ಲಿ ರಾಜ್ಯ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ನಲ್ಲಿ ಸಮರ್ಥವಾಗಿ ವಾದ ಮಂಡಿಸಿದ್ದಾರೆ.
Shashikiran Shetty