![ಸರ್ಕಾರಿ ಅಭಿಯೋಜಕ ನೇಮಕ ರದ್ದು ಸಾಧ್ಯತೆ? ಅಕ್ರಮದ ಬಗ್ಗೆ ಸಮಗ್ರ ತನಿಖೆಗೆ ಸರ್ಕಾರ ಸೂಚನೆ ಸರ್ಕಾರಿ ಅಭಿಯೋಜಕ ನೇಮಕ ರದ್ದು ಸಾಧ್ಯತೆ? ಅಕ್ರಮದ ಬಗ್ಗೆ ಸಮಗ್ರ ತನಿಖೆಗೆ ಸರ್ಕಾರ ಸೂಚನೆ](https://blogger.googleusercontent.com/img/b/R29vZ2xl/AVvXsEjHZWgCsFCLAin-RBVFUOyZXJpASwurQQHTflyc8C_porUgQptyBc53psrZ-piD7tLQc_76PQ0pXRb9dtjl4x515XAYtPPoX8voJMGNwoTH4WPwpvHUlETPEoqaNKEqfhDwijna0qaHNxpNBmMYgMagnMB5-SiWhdGxD1efP61uaCazQLMADYrgFCwjgA/w640-h348/Karnataka%20Assembly.jpg)
ಸರ್ಕಾರಿ ಅಭಿಯೋಜಕ ನೇಮಕ ರದ್ದು ಸಾಧ್ಯತೆ? ಅಕ್ರಮದ ಬಗ್ಗೆ ಸಮಗ್ರ ತನಿಖೆಗೆ ಸರ್ಕಾರ ಸೂಚನೆ
ಸರ್ಕಾರಿ ಅಭಿಯೋಜಕ ನೇಮಕ ರದ್ದು ಸಾಧ್ಯತೆ? ಅಕ್ರಮದ ಬಗ್ಗೆ ಸಮಗ್ರ ತನಿಖೆಗೆ ಸರ್ಕಾರ ಸೂಚನೆ
ಸಹಾಯಕ ಸರ್ಕಾರಿ ಅಭಿಯೋಜಕರು ಮತ್ತು ಸಹಾಯಕ ಅಭಿಯೋಜಕರ ನೇಮಕಾತಿ ರದ್ದು ಆಗುವ ಸಾಧ್ಯತೆ ಇದೆ. ಈ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸಮಗ್ರ ತನಿಖೆಗೆ ರಾಜ್ಯ ಸರ್ಕಾರ ಸೂಚನೆ ಹೊರಡಿಸಿದೆ.
06-06-2023ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಟಿಪ್ಪಣಿಯೊಂದನ್ನು ಹೊರಡಿಸಿದ್ದು, ಇದರಲ್ಲಿ ನೇಮಕಾತಿಯ ಬಗ್ಗೆ ತನಿಖೆಗೆ ಪ್ರಸ್ತಾಪಿಸಲಾಗಿದೆ.
ಸಹಾಯಕ ಸರ್ಕಾರಿ ಅಭಿಯೋಜಕರು ಮತ್ತು ಸಹಾಯಕ ಅಭಿಯೋಜಕರ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಬಗ್ಗೆ ಸಾಕ್ಷ್ಟು ದೂರುಗಳು ಕೇಳಿಬಂದಿವೆ. ಈ ಬಗ್ಗೆ ನಿರ್ದಾಕ್ಷಿಣ್ಯವಾಗಿ ಇಲಾಖಾ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿವರಗಳ ಜೊತೆಗೆ 10 ದಿನಗಳೊಳಗೆ ವರದಿ ನೀಡುವಂತೆ ಟಿಪ್ಪಣಿಯಲ್ಲಿ ಸೂಚಿಸಲಾಗಿದೆ.
ದಿ. 23/7/2022 ಮತ್ತು 24/7/2022ರಂದು ಸಹಾಯಕ ಸರ್ಕಾರಿ ಅಭಿಯೋಜಕರು, ಸಹಾಯಕ ಸರ್ಕಾರಿ ವಕೀಲರ ನೇಮಕಾತಿ ಪರೀಕ್ಷೆ ನಡೆದಿತ್ತು. ಇದರಲ್ಲಿ ವ್ಯಾಪಕ ಭ್ರಷ್ಟಾಚಾರ ಅಕ್ರಮ ನಡೆದಿದೆ ಎಂಬ ಬಗ್ಗೆ ದೂರುಗಳು ಸಲ್ಲಿಕೆಯಾಗಿವೆ.
.