![ಕೊಲೀಜಿಯಂ ಶಿಫಾರಸ್ಸು: ಕಾಲಮಿತಿ ನಿಗದಿ ಮಾಡಲು ಅಧಿಸೂಚನೆ ಕೋರಿ ಸುಪ್ರೀಂ ಕೋರ್ಟ್ಗೆ ಅರ್ಜಿ ಕೊಲೀಜಿಯಂ ಶಿಫಾರಸ್ಸು: ಕಾಲಮಿತಿ ನಿಗದಿ ಮಾಡಲು ಅಧಿಸೂಚನೆ ಕೋರಿ ಸುಪ್ರೀಂ ಕೋರ್ಟ್ಗೆ ಅರ್ಜಿ](https://blogger.googleusercontent.com/img/b/R29vZ2xl/AVvXsEiWgcD1DJ1hzon03-L84c432Po3Y4CFwImwZjob5bu4iJ_xr9EYX6rRJ_nJWeQQzrLh7tnhrta_BV8NwL1-funDfge-x--onzXUQ6OAjlkcnfMysdaBufukC2hoHKgTPWrzOWI4tPj0xhF2chFPWvl1wIDhujLubcwCjQOgOQmqsuwlQ5K1vjxED8DTDDKD/w640-h352/1234.jpg)
ಕೊಲೀಜಿಯಂ ಶಿಫಾರಸ್ಸು: ಕಾಲಮಿತಿ ನಿಗದಿ ಮಾಡಲು ಅಧಿಸೂಚನೆ ಕೋರಿ ಸುಪ್ರೀಂ ಕೋರ್ಟ್ಗೆ ಅರ್ಜಿ
Saturday, August 19, 2023
ಕೊಲೀಜಿಯಂ ಶಿಫಾರಸ್ಸು: ಕಾಲಮಿತಿ ನಿಗದಿ ಮಾಡಲು ಅಧಿಸೂಚನೆ ಕೋರಿ ಸುಪ್ರೀಂ ಕೋರ್ಟ್ಗೆ ಅರ್ಜಿ
ನ್ಯಾಯಮೂರ್ತಿಗಳ ನೇಮಕಾತಿ ಕುರಿತಂತೆ ಮುಖ್ಯ ನ್ಯಾಯಮೂರ್ತಿ ಅವರನ್ನೊಳಗೊಂಡ ಉನ್ನತ ಸಮಿತಿಯಾದ ಕೊಲೀಜಿಯಂ ಮಾಡುವ ಶಿಫಾರಸ್ಸು ಗಳ ಅನುಷ್ಠಾನಕ್ಕೆ ಕಾಲಮಿತಿ ನಿಗದಿ ಮಾಡುವಂಎ ಕೋರಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದೆ.
ಈ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾ. ಜೆ.ಬಿ. ಪರ್ದಿವಾಲಾ ಮತ್ತು ನ್ಯಾ. ಮನೋಜ್ ಮಿಶ್ರಾ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿತು.
ಅರ್ಜಿಯನ್ನು ಇತ್ಯರ್ಥ ಮಾಡಲು ಅಟಾರ್ನಿ ಜನರಲ್ ಅವರ ನೆರವು ಕೋರಿದ ನ್ಯಾಯಪೀಠ ಮುಂದಿನ ವಿಚಾರಣೆಗೆ ವಾಯ್ದೆ ಮಾಡಿತು.
ಅರ್ಜಿಯ ಪ್ರತಿಯನ್ನು ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರ ಕಚೇರಿಗೆ ತಲುಪಿಸಬೇಕು. ಈ ವಿಷಯದಲ್ಲಿ ಅಟಾರ್ನಿ ಜನರಲ್ ಅವರು ನ್ಯಾಯಾಲಯಕ್ಕೆ ನೆರವು ನೀಡಬೇಕು ಎಂದು ಮನವಿ ಮಾಡುತ್ತೇವೆ ಎಂದು ನ್ಯಾಯಪೀಠ ಹೇಳಿತು.
ಬಳಿಕ ವಿಚಾರಣೆಯನ್ನು ಸೆಪ್ಟಂಬರ್ 8ಕ್ಕೆ ನಿಗದಿ ಮಾಡಿತು.