-->
ಸ್ಪೆಷಲ್ ಕೋರ್ಟ್ ಜಡ್ಜ್‌ ಅರೆಸ್ಟ್‌!- ಇಡಿ ಅಧಿಕಾರಿಗಳ ಕಾರ್ಯಾಚರಣೆ!

ಸ್ಪೆಷಲ್ ಕೋರ್ಟ್ ಜಡ್ಜ್‌ ಅರೆಸ್ಟ್‌!- ಇಡಿ ಅಧಿಕಾರಿಗಳ ಕಾರ್ಯಾಚರಣೆ!

ಸ್ಪೆಷಲ್ ಕೋರ್ಟ್ ಜಡ್ಜ್‌ ಅರೆಸ್ಟ್‌!- ಇಡಿ ಅಧಿಕಾರಿಗಳ ಕಾರ್ಯಾಚರಣೆ!





ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯದ ಜಡ್ಜ್‌ವೊಬ್ಬರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ.



ಬಂಧಿತ ನ್ಯಾಯಾಧೀಶರನ್ನು ಪಂಚಕುಲ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸುಧೀರ್ ಪೆರ್ಮಾರ್ ಎಂದು ಗುರುತಿಸಲಾಗಿದೆ.



ಗುರುಗ್ರಾಮದಲ್ಲಿ ಆರೋಪಿ ನ್ಯಾಯಾಧೀಶರ ಸುಧೀರ್ ಪರ್ಮಾರ್ ಅವರನ್ನು ಬಂಧಿಸಲಾಗಿದೆ. ವಿಚಾರಣೆಗೆ ಒಳಪಡಿಸಿದ ನಂತರ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ನ ಅನುಮತಿ ಪಡೆದು ಬಂಧಿಸಲಾಗಿದೆ.


ಪರ್ಮಾರ್ ಅವರನ್ನು ಬಂಧಿಸುವ ಮೊದಲು ಅವರ ಅಳಿಯ ಅಜಯ್ ಪರ್ಮಾರ್, ರಿಯಲ್ ಎಸ್ಟೇಟ್ ಉದ್ಯಮಿಗಳಾದ ಬಸಂತ್ ಬನ್ಸಾಲ್, ಪರಾಬ್ ಬನ್ಸಾಲ್ ಮತ್ತು ಲಲಿತ್ ಗೋಯಲ್ ಎಂಬವರನ್ನು ಇದೇ ಪ್ರಕರಣದಲ್ಲಿ ಬಂಧಿಸಲಾಗಿತ್ತು.


ಪಂಚಕುಲ ಪಿಎಂಎಲ್‌ಎ ವಿಶೇಷ ನ್ಯಾಯಾಲಯದಲ್ಲಿ ಸಿಬಿಐ ಮತ್ತು ಇಡಿ ವಿಶೇಷ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸುತ್ತಿದ್ದ ಪರ್ಮಾರ್ ವಿರುದ್ಧ ಹರ್ಯಾಣ ಭ್ರಷ್ಟಾಚಾರ ನಿಗ್ರಹ ದಳ ಎಪ್ರಿಲ್‌ನಲ್ಲಿ ಲಂಚದ ಆರೋಪದಲ್ಲಿ ಎಫ್‌ಐಆರ್‌ ದಾಖಲಿಸಲಾಗಿತ್ತು.


Ads on article

Advertise in articles 1

advertising articles 2

Advertise under the article