-->
ಪೊಲೀಸ್ ದೂರು ಪ್ರಾಧಿಕಾರಕ್ಕೆ ನ್ಯಾ. ಸುಧೀಂದ್ರ ರಾವ್ ಅಧ್ಯಕ್ಷ: ಸರ್ಕಾರ ನೇಮಕ

ಪೊಲೀಸ್ ದೂರು ಪ್ರಾಧಿಕಾರಕ್ಕೆ ನ್ಯಾ. ಸುಧೀಂದ್ರ ರಾವ್ ಅಧ್ಯಕ್ಷ: ಸರ್ಕಾರ ನೇಮಕ

ಪೊಲೀಸ್ ದೂರು ಪ್ರಾಧಿಕಾರಕ್ಕೆ ನ್ಯಾ. ಸುಧೀಂದ್ರ ರಾವ್ ಅಧ್ಯಕ್ಷ: ಸರ್ಕಾರ ನೇಮಕ





ರಾಜ್ಯ ಪೊಲೀಸ್ ದೂರು ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎನ್. ಕೆ. ಸುಧೀಂದ್ರ ರಾವ್ ಅವರನ್ನು ನೇಮಿಸಲಾಗಿದೆ. ರಾಜ್ಯ ಸರ್ಕಾರ ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಿದೆ.


2022ರ ಜುಲೈ 18ರಿಂದ ಪೊಲೀಸ್ ದೂರು ಪ್ರಾಧಿಕಾರದ ಅಧ್ಯಕ್ಷರ ಹುದ್ದೆ ಖಾಲಿಯಾಗಿತ್ತು.

ಭ್ರಷ್ಟಾಚಾರ ವಿರುದ್ಧ ಪ್ರಬಲ ಧ್ವನಿಯಾಗಿ ನಿವೃತ್ತ ನ್ಯಾ. ಸುಧೀಂದ್ರ ರಾವ್ ಗುರುತಿಸಿಕೊಂಡಿದ್ದರು. 



ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಅವರು ಹಲವು ರಾಜಕಾರಣಿಗಳಿಗೆ ಕಾನೂನಿನ ಬಿಸಿ ಮುಟ್ಟಿಸಿದ್ದರು. ಅಕ್ರಮ ಡೀನೋಟಿಫಿಕೇಷನ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮಾಜಿ ಸಿಎಂ ಸೇರಿದಂತೆ ಹಲವು ರಾಜಕೀಯ ನಾಯಕರನ್ನು ಜೈಲಿಗೆ ಕಳಿಸಿದ್ದರು.



ಇದೀಗ ಪೊಲೀಸ್ ದೂರು ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಸರ್ಕಾರ ನೇಮಿಸಿದ್ದು, ಸುಧೀಂದ್ರ ರಾವ್ ತಮ್ಮ ಭ್ರಷ್ಟಾಚಾರ ವಿರೋಧಿ ಹೋರಾಟವನ್ನು ಈ ಹುದ್ದೆಯಲ್ಲೂ ಮುಂದುವರಿಸಲಿದ್ದಾರೆ ಎಂದು ಎಲ್ಲರ ನಿರೀಕ್ಷೆ.



Ads on article

Advertise in articles 1

advertising articles 2

Advertise under the article