![ಕರ್ನಾಟಕ ಹೈಕೋರ್ಟ್: ಇಬ್ಬರು ಹೆಚ್ಚುವರಿ ನ್ಯಾಯಮೂರ್ತಿಗಳ ಸೇವೆ ಖಾಯಂ ಕರ್ನಾಟಕ ಹೈಕೋರ್ಟ್: ಇಬ್ಬರು ಹೆಚ್ಚುವರಿ ನ್ಯಾಯಮೂರ್ತಿಗಳ ಸೇವೆ ಖಾಯಂ](https://blogger.googleusercontent.com/img/b/R29vZ2xl/AVvXsEiMqERs-Lu8A58FX1MM6yFphfFlB5nSIBFwpLg73qQmKUClMvSHfsq1k2saVLMIptp14kykAwu65Fc4d-ltlPgXjIGVwQa4it04l6rx-kxL2b_yPrD0zvxfavvz-QkPidLOqiODSaZpYgNWxVb2iJArjvPWQLXx9BX4sXh0VZde69uxvUdmTuneESOvLcSn/w640-h338/high-court-karnataka.jpg)
ಕರ್ನಾಟಕ ಹೈಕೋರ್ಟ್: ಇಬ್ಬರು ಹೆಚ್ಚುವರಿ ನ್ಯಾಯಮೂರ್ತಿಗಳ ಸೇವೆ ಖಾಯಂ
Thursday, September 14, 2023
ಕರ್ನಾಟಕ ಹೈಕೋರ್ಟ್: ಇಬ್ಬರು ಹೆಚ್ಚುವರಿ ನ್ಯಾಯಮೂರ್ತಿಗಳ ಸೇವೆ ಖಾಯಂ
ಕರ್ನಾಟಕ ಹೈಕೋರ್ಟ್ನಲ್ಲಿ ಇಬ್ಬರು ಹೆಚ್ಚುವರಿ ನ್ಯಾಯಮೂರ್ತಿಗಳ ಸೇವೆ ಖಾಯಂಗೊಳಿಸಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ನ್ಯಾ. ಅನಂತ ರಾಮನಾಥ ಹೆಗ್ಡೆ ಮತ್ತು ಕೆ.ಎಸ್. ಹೇಮಲೇಖಾ ಅವರು ಖಾಯಂ ಸೇವೆಗೊಳಪಟ್ಟ ನ್ಯಾಯಾಧೀಶರಾಗಿದ್ದಾರೆ.
ಇದೇ ವೇಳೆ, ಹೆಚ್ಚುವರಿ ನ್ಯಾಯಮೂರ್ತಿ ಎಸ್. ರಾಚಯ್ಯ ಅವರನ್ನು ಹೊಸದಾಗಿ ನವೆಂಬರ್ 8ರಿಂದ ಮತ್ತೊಂದು ವರ್ಷ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಕರ್ತವ್ಯ ನಿರ್ವಹಿಸಲು ಆದೇಶಿಸಲಾಗಿದೆ.
ನ್ಯಾ. ಅನಂತ ರಾಮನಾಥ ಹೆಗ್ಡೆ ಮತ್ತು ಕೆ.ಎಸ್. ಹೇಮಲೇಖಾ ಅವರನ್ನು ಖಾಯಂ ನ್ಯಾಯಾಧೀಶರಾಗಿ ನೇಮಿಸುವಂತೆ ಕೊಲೀಜಿಯಂ ಶಿಫಾರಸ್ಸು ಮಾಡಿತ್ತು. ಅದೇ ರೀತಿ, ಹೆಚ್ಚುವರಿ ನ್ಯಾಯಮೂರ್ತಿ ಎಸ್. ರಾಚಯ್ಯ ಅವರನ್ನು ಹೆಚ್ಚುವರಿ ನ್ಯಾಯಮೂರ್ತಿಯಾಗಿ ಮುಂದುವರಿಸುವಂತೆ ಆಗಸ್ಟ್ 31ರಂದು ಶಿಫಾರಸ್ಸು ಮಾಡಲಾಗಿತ್ತು.