![ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿ ನ್ಯಾ. ನಾರಾಯಣಸ್ವಾಮಿ, ಸದಸ್ಯರಾಗಿ ಶ್ಯಾಂ ಭಟ್ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿ ನ್ಯಾ. ನಾರಾಯಣಸ್ವಾಮಿ, ಸದಸ್ಯರಾಗಿ ಶ್ಯಾಂ ಭಟ್](https://blogger.googleusercontent.com/img/b/R29vZ2xl/AVvXsEhyKXJYAFXxXNYx-MF-RN-Z4VHpCHMxNfXyU7kgRwER3WJ5hFb5CP3oF7npovsJo4FpmK55afS2BZYL0uGOCb7aGZNzoxa1o96aD7ynkDOqCkh529vdMkwlhtHaVfSJBpYmsQAiRqvbhX4yaMP22NqOjgcxmkvV6AS1StWh_-ioPKbTeD2yuE3-wcpZuV_R/w640-h348/Karnataka%20Assembly.jpg)
ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿ ನ್ಯಾ. ನಾರಾಯಣಸ್ವಾಮಿ, ಸದಸ್ಯರಾಗಿ ಶ್ಯಾಂ ಭಟ್
Monday, November 27, 2023
ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿ ನ್ಯಾ. ನಾರಾಯಣಸ್ವಾಮಿ, ಸದಸ್ಯರಾಗಿ ಶ್ಯಾಂ ಭಟ್
ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿ ಹಿಮಾಚಲ ಪ್ರದೇಶ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ನಾರಾಯಣ ಸ್ವಾಮಿ ಅವರನ್ನು ನೇಮಿಸಲಾಗಿದೆ.
ಆಯೋಗದ ಸದಸ್ಯರಾಗಿ ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷರಾದ ಟಿ. ಶ್ಯಾಂ ಭಟ್ ಮತ್ತು ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಎಸ್.ಕೆ. ವಂಟಿಗೋಡಿ ಅವರನ್ನು ನೇಮಿಸಲಾಗಿದೆ.
ಈ ಮೂವರನ್ನೂ ಆಯೋಗಕ್ಕೆ ನೇಮಕ ಮಾಡಿ ರಾಜ್ಯ ಸರ್ಕಾರ ಕಳೆದ ಶನಿವಾರ ಆದೇಶ ಹೊರಡಿಸಿದೆ.
ಚಿತ್ರದುರ್ಗದ ಚಳ್ಳಕೆರೆ ತಾಲೂಕಿನವರಾದ ಎಲ್. ನಾರಾಯಣ ಸ್ವಾಮಿ 1987ರಲ್ಲಿ ವಕೀಲ ವೃತ್ತಿ ಆರಂಭಿಸಿದ್ದರು.
2007ರ ಜುಲೈ 7ರಂದು ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡ ಅವರು 2009ರ ಎಪ್ರಿಲ್ 17ರಂದು ಖಾಯಂ ನ್ಯಾಯಮೂರ್ತಿಯಾಗಿ ನೇಮಕಗೊಂಡರು.
2019ರ ಆಗಸ್ಟ್ನಲ್ಲಿ ಹಿಮಾಚಲ ಪ್ರದೇಶದ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡ ಅವರು 2021ರ ಜುಲೈನಲ್ಲಿ ನಾರಾಯಣ ಸ್ವಾಮಿ ಅವರು ನಿವೃತ್ತಿ ಹೊಂದಿದರು.