![ಮಹಿಳಾ ವಕೀಲರ ಬವಣೆ ಕಂಡು ಮರುಗಿದ ಹೈಕೋರ್ಟ್: ಕಲಾಪಕ್ಕೆ ಓಡೋಡಿ ಬಂದ ವಕೀಲರು, ಟ್ರಾಫಿಕ್ ಎಸ್ಪಿಗೆ ಸಮನ್ಸ್ ಮಹಿಳಾ ವಕೀಲರ ಬವಣೆ ಕಂಡು ಮರುಗಿದ ಹೈಕೋರ್ಟ್: ಕಲಾಪಕ್ಕೆ ಓಡೋಡಿ ಬಂದ ವಕೀಲರು, ಟ್ರಾಫಿಕ್ ಎಸ್ಪಿಗೆ ಸಮನ್ಸ್](https://blogger.googleusercontent.com/img/b/R29vZ2xl/AVvXsEjmmO-MCbIJl9FNReF6wGPNWKvVRH9xkeU-CSh78h1tsTiJiWDmEcJwJ4ujYtw8LVH3_ggrqMZSk7pO4dgViA7SzPnisgy82Pgbmj1Xu6fwDKeTUWHP6twpvIY7GyS-DVod5EBX7uAeP84ryJCHU0L89WRpLTiJHaz8kfDAbu3f-x9aa0RWz41RqROYBA/w640-h352/1234.jpg)
ಮಹಿಳಾ ವಕೀಲರ ಬವಣೆ ಕಂಡು ಮರುಗಿದ ಹೈಕೋರ್ಟ್: ಕಲಾಪಕ್ಕೆ ಓಡೋಡಿ ಬಂದ ವಕೀಲರು, ಟ್ರಾಫಿಕ್ ಎಸ್ಪಿಗೆ ಸಮನ್ಸ್
ಮಹಿಳಾ ವಕೀಲರ ಬವಣೆ ಕಂಡು ಮರುಗಿದ ಹೈಕೋರ್ಟ್: ಕಲಾಪಕ್ಕೆ ಓಡೋಡಿ ಬಂದ ವಕೀಲರು, ಟ್ರಾಫಿಕ್ ಎಸ್ಪಿಗೆ ಸಮನ್ಸ್
ಟ್ರಾಫಿಕ್ ಜಾಮ್ಗೆ ಸಿಲುಕಿದ ಮಹಿಳಾ ವಕೀಲರೊಬ್ಬರು ತಾವು ವಾದಿಸುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಕಲಾಪದಲ್ಲಿ ಭಾಗವಹಿಸಲು ಓಡೋಡಿ ಬಂದ ಘಟನೆ ಬಗ್ಗೆ ವಿವರ ನೀಡುವಂತೆ ಅಲಹಾಬಾದ್ ಹೈಕೋರ್ಟ್ ಪ್ರಯಾಗ್ರಾಜ್ನ ಎಸ್ಪಿ ಟ್ರಾಫಿಕ್ ಸಮನ್ಸ್ ನೀಡಿದೆ.
ಕೆಲವು ಪೊಲೀಸ್ ಸಿಬ್ಬಂದಿ ಕರ್ತವ್ಯ ಪ್ರಯುಕ್ತ ರಸ್ತೆಯಲ್ಲಿದ್ದರೂ ವಾಹನಗಳ ಜಾಮ್ ಮತ್ತು ಪಾರ್ಕಿಂಗ್ ಅನ್ನು ನಿರ್ವಹಿಸಲು ಸಾಧ್ಯವಾಗಲಿಲ್ಲ ಎಂದು ವಕೀಲೆ ಸಾಹೇರ್ ನಖ್ವಿ ನ್ಯಾಯಪೀಠಕ್ಕೆ ನಿವೇದಿಸಿಕೊಂಡರು.
"ಶ್ರೀಮತಿ ಸಹೇರ್ ನಖ್ವಿ, ಯುವ ವಕೀಲರು ಹೈಕೋರ್ಟಿನ ಸುತ್ತಲೂ ಅಡ್ಡಾದಿಡ್ಡಿಯಾಗಿ ನಿಲುಗಡೆ ಮಾಡಿದ ಹಲವಾರು ವಾಹನಗಳ ಕೋಪವನ್ನು ಎದುರಿಸಿದ್ದಾರೆ ಮತ್ತು ಅವರು ತಮ್ಮ ಕಾರನ್ನು ಹೈಕೋರ್ಟಿನ ಗೇಟ್ನಿಂದ ಸುಮಾರು 1 ಕಿಮೀ ದೂರದಲ್ಲಿ ನಿಲ್ಲಿಸಬೇಕು ಮತ್ತು ಅವರು ಸಂಜೆ 4 ಗಂಟೆಗೆ ಮೊದಲು ಈ ನ್ಯಾಯಾಲಯವನ್ನು ತಲುಪಲು ಓಡಬೇಕು. ಆದ್ದರಿಂದ ಕಾನೂನು ಕ್ರಮದ ಕೊರತೆಯಿಂದ ತನ್ನ ಪ್ರಕರಣವನ್ನು ವಜಾಗೊಳಿಸಬಾರದು. ಕೆಲವು ಪೊಲೀಸ್ ಸಿಬ್ಬಂದಿಗಳು ರಸ್ತೆಯಲ್ಲಿ ಜಾಮ್ ಮತ್ತು ವಾಹನಗಳ ನಿಲುಗಡೆಯನ್ನು ನಿರ್ವಹಿಸಲು ಸಾಧ್ಯವಾಗದೆ ಇರುತ್ತಾರೆ ಎಂದು ಅವರು ವಿವರಿಸಿದರು," ಎಂದು ನ್ಯಾಯಮೂರ್ತಿ ಸೌರಭ್ ಶ್ಯಾಮ್ ಶಾಂಶೇರಿ ಅವರ ಪೀಠವು ಗಮನಿಸಿತು.
ಹಿರಿಯ ನ್ಯಾಯವಾದಿ ಅಮರೇಂದ್ರ ನಾಥ್ ಸಿಂಗ್ ಕೂಡ ಆಕೆಯ ದುರವಸ್ಥೆಯನ್ನು ಪ್ರತಿಧ್ವನಿಸಿ, ಈ ನಿಟ್ಟಿನಲ್ಲಿ ಸೂಕ್ತ ನಿರ್ಧಾರವನ್ನು ಅಂಗೀಕರಿಸುವಂತೆ ನ್ಯಾಯಾಲಯವನ್ನು ಕೋರಿದರು.
ಕೋರ್ಟ್ ಕಲಾಪದ ಸಮಯಕ್ಕೆ ಸರಿಯಾಗಿ ತಲುಪಲು ಟ್ರಾಫಿಕ್ನಿಂದಾಗಿ ಕೋರ್ಟ್ಗೆ ಓಡೋಡಿ ಬರಬೇಕಾದ ಕಾರಣ, ನ್ಯಾಯಪೀಠದ ಮುಂದೆ ವಿವರ ನೀಡುವಂತೆ ಅಲಹಾಬಾದ್ ಹೈಕೋರ್ಟ್ ಪ್ರಯಾಗ್ರಾಜ್ನ ಎಸ್ಪಿ ಟ್ರಾಫಿಕ್ಗೆ ಸೂಚಿಸಿ ಸಮನ್ಸ್ ಜಾರಿ ಗೊಳಿಸಿದ್ದು, ಮುಂದಿನ ವಿಚಾರಣೆಯಲ್ಲಿ ಖುದ್ದು ಹಾಜರಿರುವಂತೆ ತಾಕೀತು ಮಾಡಿದೆ.
ನ್ಯಾಯಾಲಯವು "ಎಸ್.ಪಿ. ಟ್ರಾಫಿಕ್, ಪ್ರಯಾಗ್ರಾಜ್ ಅವರು ಮುಂದಿನ ದಿನಾಂಕದಂದು ಈ ನ್ಯಾಯಾಲಯದ ಮುಂದೆ ಹಾಜರಾಗಲು ಸೂಚಿಸಲಾಗಿದೆ.
ಹೈಕೋರ್ಟ್ ಸುತ್ತಲಿನ ವಾಹನ ನಿಲುಗಡೆ, ಕೋರ್ಟ್ಗೆ ಆಗಮನ ಮತ್ತು ನಿರ್ಗಮನ ವಾಹನ ದಟ್ಟಣೆ, ನಿಯಂತ್ರಣ ಹಾಗೂ ಟ್ರಾಫಿಕ್ ಯೋಜನೆಯನ್ನು ಸಿದ್ಧಪಡಿಸಿ ಮುಂದಿನ ದಿನಾಂಕದಂದು ಈ ನ್ಯಾಯಾಲಯಕ್ಕೆ ಖುದ್ದು ಸಲ್ಲಿಸುವಂತೆ ನಿರ್ದೇಶಿಸಲಾಗಿದೆ.
ನ್ಯಾಯಪೀಠಕ್ಕೆ ಸಹಕರಿಸಲು ಮುಂದಿನ ದಿನಾಂಕದಂದು ಹಾಜರಾಗುವಂತೆ ಹಿರಿಯ ವಕೀಲ ಅಮರೇಂದ್ರ ನಾಥ್ ಸಿಂಗ್ ಅವರಿಗೆ ನ್ಯಾಯಾಲಯ ಸೂಚಿಸಿದೆ.