-->
ನೂತನ ಮೀಸಲಾತಿ ಆಧ್ಯಾದೇಶ: ನೇರ ನೇಮಕಾತಿ, ಮುಂಬಡ್ತಿಗೆ ರಾಜ್ಯ ಸರ್ಕಾರ ತಡೆ

ನೂತನ ಮೀಸಲಾತಿ ಆಧ್ಯಾದೇಶ: ನೇರ ನೇಮಕಾತಿ, ಮುಂಬಡ್ತಿಗೆ ರಾಜ್ಯ ಸರ್ಕಾರ ತಡೆ

ನೂತನ ಮೀಸಲಾತಿ ಆಧ್ಯಾದೇಶ: ನೇರ ನೇಮಕಾತಿ, ಮುಂಬಡ್ತಿಗೆ ರಾಜ್ಯ ಸರ್ಕಾರ ತಡೆ




ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳದ ಪ್ರಮಾಣಕ್ಕೆ ಅನುಗುಣವಾಗಿ ರೋಸ್ಟರ್ ಬಿಂದುಗಳನ್ನು ಗುರುತಿಸುವವರೆಗೂ ನೇರ ನೇಮಕಾತಿ ಮತ್ತು ಭಡ್ತಿ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಸ್ಥಗಿತಗೊಳಿಸಿದೆ.



ಈ ಬಗ್ಗೆ 17-11-2022ರಂದು ಟಿಪ್ಪಣಿ ಬಿಡುಗಡೆ ಮಾಡಿರುವ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಎಲ್ಲ ಇಲಾಖೆಗಳಲ್ಲಿ ನೇರ ನೇಮಕಾತಿ ಮತ್ತು ಭಡ್ತಿ ಪ್ರಕ್ರಿಯೆಯನ್ನು ತಡೆ ಹಿಡಿಯುವಂತೆ ಸೂಚಿಸಿದ್ದಾರೆ.



ಸರ್ಕಾರದ ಅಧಿಸೂಚನೆ ಸಂಖ್ಯೆ ಸಂವ್ಯಶಾಇ:29:ಶಾಸನ:2022 Dated 23-10-2022ರ ಮೂಲಕ ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳು ಅಧ್ಯಾದೇಶ -2022 Dated 1-11-2022 ರಿಂದ ಜಾರಿಗೊಳಿಸಲಾಗಿದೆ. 



ಇದರ ಅನ್ವಯ ರಾಜ್ಯಾಧೀನ ಸೇವೆಗಳಲ್ಲಿ ನೇರ ನೇಮಕಾತಿ ಮತ್ತು ಪದೋನ್ನತಿಯಲ್ಲಿ ಅನುಸೂಚಿತ ಜಾತಿ ಮತ್ತು ಪಂಗಡಗಳಿಗೆ ಸೇರಿದ ವ್ಯಕ್ತಿಗಳಿಗೆ ಹೆಚ್ಚಿಸಲಾಗಿರುವ ಮೀಸಲಾತಿಯನ್ನು ಜಾರಿಗೊಳಿಸಲು ರೋಸ್ಟರ್ ಬಿಂದುಗಳನ್ನು ಗುರುತಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ. 



ಈ ಪ್ರಕ್ರಿಯೆ ಅಂತಿಮಗೊಂಡು ಪ್ರಕಟವಾಗುವ ವರೆಗೆ ಈ ನೇರ ನೇಮಕಾತಿ ಮತ್ತು ಮುಂಬಡ್ತಿ ಪ್ರಕ್ರಿಯೆಗೆ ಸಂಬಂಧಿಸಿ ಇಲಾಖಾ ಮುಂಬಡ್ತಿ ಸಭೆಯನ್ನು ನಡೆಸಬಾರದು ಎಂದು ಟಿಪ್ಪಣಿಯಲ್ಲಿ ಸೂಚಿಸಲಾಗಿದೆ.



ಎಲ್ಲ ಇಲಾಖೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿ ಹಾಗೂ ಕಾರ್ಯದರ್ಶಿಗಳಿಗೆ ಟಿಪ್ಪಣಿ ರವಾನಿಸಲಾಗಿದೆ.



ಟಿಪ್ಪಣಿ: ಮು.ಕಾ./502089/2022 Dated 17-11-2022



Ads on article

Advertise in articles 1

advertising articles 2

Advertise under the article