![ನೂತನ ಮೀಸಲಾತಿ ಆಧ್ಯಾದೇಶ: ನೇರ ನೇಮಕಾತಿ, ಮುಂಬಡ್ತಿಗೆ ರಾಜ್ಯ ಸರ್ಕಾರ ತಡೆ ನೂತನ ಮೀಸಲಾತಿ ಆಧ್ಯಾದೇಶ: ನೇರ ನೇಮಕಾತಿ, ಮುಂಬಡ್ತಿಗೆ ರಾಜ್ಯ ಸರ್ಕಾರ ತಡೆ](https://blogger.googleusercontent.com/img/b/R29vZ2xl/AVvXsEh-KNdeUPF0aEJEbyL9zx5Zx3PZZ5ryfKr_9HukOw8KPnx7qNPn2V4A0R_5GIsRXAcAyxVeZXtKcnzVaY6EGBkifgswJIThhzEPMRwzAgXKNVRGj_4C8eEf8VXMWuPEhdHAMtetXZKBXAWF11YS_QRkak6JyU1PbIow9wGBuFoHe6MXH7JQgPtDRzDGpQ/w640-h462/Court%20Beat%20News%20(2).jpg)
ನೂತನ ಮೀಸಲಾತಿ ಆಧ್ಯಾದೇಶ: ನೇರ ನೇಮಕಾತಿ, ಮುಂಬಡ್ತಿಗೆ ರಾಜ್ಯ ಸರ್ಕಾರ ತಡೆ
ನೂತನ ಮೀಸಲಾತಿ ಆಧ್ಯಾದೇಶ: ನೇರ ನೇಮಕಾತಿ, ಮುಂಬಡ್ತಿಗೆ ರಾಜ್ಯ ಸರ್ಕಾರ ತಡೆ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳದ ಪ್ರಮಾಣಕ್ಕೆ ಅನುಗುಣವಾಗಿ ರೋಸ್ಟರ್ ಬಿಂದುಗಳನ್ನು ಗುರುತಿಸುವವರೆಗೂ ನೇರ ನೇಮಕಾತಿ ಮತ್ತು ಭಡ್ತಿ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಸ್ಥಗಿತಗೊಳಿಸಿದೆ.
ಈ ಬಗ್ಗೆ 17-11-2022ರಂದು ಟಿಪ್ಪಣಿ ಬಿಡುಗಡೆ ಮಾಡಿರುವ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಎಲ್ಲ ಇಲಾಖೆಗಳಲ್ಲಿ ನೇರ ನೇಮಕಾತಿ ಮತ್ತು ಭಡ್ತಿ ಪ್ರಕ್ರಿಯೆಯನ್ನು ತಡೆ ಹಿಡಿಯುವಂತೆ ಸೂಚಿಸಿದ್ದಾರೆ.
ಸರ್ಕಾರದ ಅಧಿಸೂಚನೆ ಸಂಖ್ಯೆ ಸಂವ್ಯಶಾಇ:29:ಶಾಸನ:2022 Dated 23-10-2022ರ ಮೂಲಕ ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳು ಅಧ್ಯಾದೇಶ -2022 Dated 1-11-2022 ರಿಂದ ಜಾರಿಗೊಳಿಸಲಾಗಿದೆ.
ಇದರ ಅನ್ವಯ ರಾಜ್ಯಾಧೀನ ಸೇವೆಗಳಲ್ಲಿ ನೇರ ನೇಮಕಾತಿ ಮತ್ತು ಪದೋನ್ನತಿಯಲ್ಲಿ ಅನುಸೂಚಿತ ಜಾತಿ ಮತ್ತು ಪಂಗಡಗಳಿಗೆ ಸೇರಿದ ವ್ಯಕ್ತಿಗಳಿಗೆ ಹೆಚ್ಚಿಸಲಾಗಿರುವ ಮೀಸಲಾತಿಯನ್ನು ಜಾರಿಗೊಳಿಸಲು ರೋಸ್ಟರ್ ಬಿಂದುಗಳನ್ನು ಗುರುತಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ.
ಈ ಪ್ರಕ್ರಿಯೆ ಅಂತಿಮಗೊಂಡು ಪ್ರಕಟವಾಗುವ ವರೆಗೆ ಈ ನೇರ ನೇಮಕಾತಿ ಮತ್ತು ಮುಂಬಡ್ತಿ ಪ್ರಕ್ರಿಯೆಗೆ ಸಂಬಂಧಿಸಿ ಇಲಾಖಾ ಮುಂಬಡ್ತಿ ಸಭೆಯನ್ನು ನಡೆಸಬಾರದು ಎಂದು ಟಿಪ್ಪಣಿಯಲ್ಲಿ ಸೂಚಿಸಲಾಗಿದೆ.
ಎಲ್ಲ ಇಲಾಖೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿ ಹಾಗೂ ಕಾರ್ಯದರ್ಶಿಗಳಿಗೆ ಟಿಪ್ಪಣಿ ರವಾನಿಸಲಾಗಿದೆ.
ಟಿಪ್ಪಣಿ: ಮು.ಕಾ./502089/2022 Dated 17-11-2022