-->
ವಕೀಲರ ಪೋಷಕರಿಗೂ ವಿಮೆ: ಅರ್ಜಿಯನ್ನು ಐಪಿಎಲ್‌ ಆಗಿ ಪರಿವರ್ತಿಸಿದ ಕರ್ನಾಟಕ ಹೈಕೋರ್ಟ್‌!

ವಕೀಲರ ಪೋಷಕರಿಗೂ ವಿಮೆ: ಅರ್ಜಿಯನ್ನು ಐಪಿಎಲ್‌ ಆಗಿ ಪರಿವರ್ತಿಸಿದ ಕರ್ನಾಟಕ ಹೈಕೋರ್ಟ್‌!

ವಕೀಲರ ಪೋಷಕರಿಗೂ ವಿಮೆ: ಅರ್ಜಿಯನ್ನು ಐಪಿಎಲ್‌ ಆಗಿ ಪರಿವರ್ತಿಸಿದ ಕರ್ನಾಟಕ ಹೈಕೋರ್ಟ್‌!





ವಕೀಲರ ಪರಿಷತ್ ಮೂಲಕ ಕೇಂದ್ರ ಸರ್ಕಾರ ನೀಡಲು ಉದ್ದೇಶಿಸಿರುವ ವಿಮಾ ಸೌಲಭ್ಯವನ್ನು ವಕೀಲರ ಪೋಷಕರಿಗೂ ವಿಸ್ತರಿಸಬೇಕು ಎಂದು ಕೋರಿ ತುಮಕೂರಿನ ವಕೀಲರಾದ ಎಲ್. ರಮೇಶ್ ನಾಯಕ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.



ಈ ಅರ್ಜಿಯನ್ನು ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆಗೆ ಎತ್ತಿಕೊಂಡಿತು.



ವೃತ್ತಿನಿರತ ವಕೀಲರ ಪೋಷಕರನ್ನೂ ವಿಮಾ ಯೋಜನೆಯ ವ್ಯಾಪ್ತಿಗೆ ಒಳಪಡಿಸುವ ವಿಚಾರವು ಸಾಮಾಜಿಕ ಕ್ರಿಯಾ ದಾವೆಯ ಗುಣ ಹೊಂದಿದ್ದು, ಈ ಅರ್ಜಿಯನ್ನು ರೋಸ್ಟರ್‌ ಪೀಠದ ಮುಂದೆ ವಿಚಾರಣೆಗೆ ಪಟ್ಟಿ ಮಾಡುವಂತೆ ರಿಜಿಸ್ಟ್ರಿಗೆ ನಿರ್ದೇಶನ ನೀಡಲಾಯಿತು.



ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ರಾಜ್ಯದಲ್ಲಿ ಇರುವ ಎಲ್ಲ ವಕೀಲರ ಮಾಹಿತಿಯನ್ನು ಪಡೆದುಕೊಂಡಿದೆ. ಈ ಬಗ್ಗೆ ಎಲ್ಲ ವಕೀಲರ ಸಂಘಗಳಿಗೂ ಅದು ಪತ್ರ ಬರೆದಿದೆ. ಆದರೆ, ಈ ಪ್ರಕ್ರಿಯಯಲ್ಲಿ ವಕೀಲರ ಪತಿ ಯಾ ಪತ್ನಿ ಮತ್ತು ಮಕ್ಕಳ ವಿವರವನ್ನು ಪಡೆದುಕೊಂಡಿದೆ. ಆದರೆ, ಪೋಷಕರನ್ನು ವಿಮಾ ಯೋಜನೆಯ ವ್ಯಾಪ್ತಿಗೆ ತಂದಿಲ್ಲ ಎಂದು ವಕೀಲರು ವಾದಿಸಿದ್ದಾರೆ.


ಈ ವಿಷಯದ ಕುರಿತಂತೆ ವಕೀಲರ ಪರಿಷತ್ತಿಗೆ ಇ-ಮೇಲ್ ಮೂಲಕ ಮನವಿ ಸಲ್ಲಿಸಲಾಗಿದೆ. ಆದ್ದರಿಂದ ವಕೀಲರ ವಿಮಾ ಯೋಜನೆಯ ವ್ಯಾಪ್ತಿಗೆ ವಕೀಲರ ಪೋಷಕರನ್ನೂ ತರಬೇಕು ಎಂದು ರಾಜ್ಯ ಸರ್ಕಾರ, ಭಾರತೀಯ ವಕೀಲರ ಪರಿಷತ್ತು ಮತ್ತು ರಾಜ್ಯ ವಕೀಲರ ಪರಿಷತ್ತಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.


Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200