-->
ಹೈಕೋರ್ಟ್ 6 ಜಡ್ಜ್ ಗಳಿಗೆ ಕೊಲೆ ಬೆದರಿಕೆ: ದುಬೈ ಗ್ಯಾಂಗ್ ಹೆಸರಲ್ಲಿ ಅನಾಮಧೇಯನ ಕೃತ್ಯ

ಹೈಕೋರ್ಟ್ 6 ಜಡ್ಜ್ ಗಳಿಗೆ ಕೊಲೆ ಬೆದರಿಕೆ: ದುಬೈ ಗ್ಯಾಂಗ್ ಹೆಸರಲ್ಲಿ ಅನಾಮಧೇಯನ ಕೃತ್ಯ

ಹೈಕೋರ್ಟ್ 6 ಜಡ್ಜ್ ಗಳಿಗೆ ಕೊಲೆ ಬೆದರಿಕೆ: ದುಬೈ ಗ್ಯಾಂಗ್ ಹೆಸರಲ್ಲಿ ಅನಾಮಧೇಯನ ಕೃತ್ಯ



ಕರ್ನಾಟಕ ಹೈಕೋರ್ಟ್ ನ ಆರು ಮಂದಿ ನ್ಯಾಯಾಧೀಶರಿಗೆ ದುಬೈ ಗ್ಯಾಂಗ್ ಎಂಬ ತಂಡದ ಸದಸ್ಯನೆನ್ನಲಾದ ಅನಾಮಧೇಯ ವ್ಯಕ್ತಿಯಿಂದ ಕೊಲೆ ಬೆದರಿಕೆ ಎದುರಾಗಿದೆ.

ತಾನು ದುಬೈ ಗ್ಯಾಂಗ್ ನ ಸದಸ್ಯನಾಗಿದ್ದು, ಆರು ಮಂದಿ ನ್ಯಾಯಾಧೀಶರನ್ನು ಕೊಲೆ ಮಾಡುವುದಾಗಿ ವಾಟ್ಸ್ಯಾಪ್ ಸಂದೇಶದ ಮೂಲಕ ಅಪರಿಚಿತ ವ್ಯಕ್ತಿಯೊಬ್ಬ ಕೊಲೆ ಬೆದರಿಕೆ  ಹಾಕಿದ್ದಾನೆ.

ಅಷ್ಟೇ ಅಲ್ಲ, ಆ ವ್ಯಕ್ತಿ ನ್ಯಾಯಮೂರ್ತಿಗಳಿಗೆ 50 ಲಕ್ಷ ರೂ.ಗಳ ಬೇಡಿಕೆಯನ್ನೂ ಇಟ್ಟಿದ್ದಾನೆ.  ಹೈಕೋರ್ಟ್ ನ ಸಾರ್ವಜನಿಕ ಸಂಪರ್ಕಾಧಿಕಾರಿ(ಪಿ.ಆರ್.ಒ.) ಕೆ. ಮುರಳೀಧರ್ ಅವರ ಅಧಿಕೃತ  ಮೊಬೈಲ್ ವಾಟ್ಸ್ಯಾಪ್ ಗೆ ಈ ಸಂದೇಶ ಕಳುಹಿಸಿದ್ಧಾನೆ. ಈ ಹಣವನ್ನು ಪಾಕಿಸ್ತಾನದ ಅಲೈಡ್ ಬ್ಯಾಂಕ್ ಲಿ.ನಲ್ಲಿ ಇರುವ ಬ್ಯಾಂಕ್ ಖಾತೆಗೆ ಈ ಹಣವನ್ನು ಜಮಾ ಮಾಡುವಂತೆ ಕೋರಿಕೆ ಇಟ್ಟಿದ್ದಾನೆ.

ದುಬೈ ಗ್ಯಾಂಗ್ ಮೂಲಕ ತಮಗೆ ಸೇರಿದಂತೆ ಒಟ್ಟು ಆರು ಮಂದಿ ನ್ಯಾಯಾಧೀಶರಿಗೆ ಈ ಬೆದರಿಕೆ ಬಂದಿರುವುದಾಗಿ ದೂರುದಾರರಾದ ಮುರಳೀಧರ್ ಅವರು ಹೇಳಿದ್ದಾರೆ.

ಬೆದರಿಕೆ ಸಂದೇಶದಲ್ಲಿ ಉಲ್ಲೇಖಿಸಲಾದ ನ್ಯಾಯಮೂರ್ತಿಗಳ ಹೆಸರು ಹೀಗಿದೆ; ಮೊಹಮ್ಮದ್ ನವಾಜ್, ಎಚ್.ಟಿ. ನರೇಂದ್ರ, ಅಶೋಕ್ ಜಿ. ನಿಜಗನ್ನನವರ್, ಎಚ್.ಪಿ. ಸಂದೇಶ್, ಕೆ. ನಟರಾಜನ್, ಬಿ. ವೀರಪ್ಪ.

ಈ ಘಟನೆಗೆ ಸಂಬಂಧಿಸಿದಂತೆ ಸೆಂಟ್ರಲ್ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಜುಲೈ 12ಕ್ಕೆ ಈ ಮೊಬೈಲ್ ಸಂದೇಶ ಬಂದಿದ್ದು, ಜುಲೈ 14ರಂದು ಪ್ರಕರಣದ ದಾಖಲಾಗಿದೆ.


Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200