-->
ಹೈಕೋರ್ಟ್ ಕದ ತಟ್ಟಿದ ಮಂಗಳೂರಿನ ಜಿ.ಆರ್. ಕಾಲೇಜ್ ವಿದ್ಯಾರ್ಥಿಗಳು: ಪರೀಕ್ಷೆಗೆ ಅವಕಾಶ ಕೋರಿ ಅರ್ಜಿ

ಹೈಕೋರ್ಟ್ ಕದ ತಟ್ಟಿದ ಮಂಗಳೂರಿನ ಜಿ.ಆರ್. ಕಾಲೇಜ್ ವಿದ್ಯಾರ್ಥಿಗಳು: ಪರೀಕ್ಷೆಗೆ ಅವಕಾಶ ಕೋರಿ ಅರ್ಜಿ

ಹೈಕೋರ್ಟ್ ಕದ ತಟ್ಟಿದ ಮಂಗಳೂರಿನ ಜಿ.ಆರ್. ಕಾಲೇಜ್ ವಿದ್ಯಾರ್ಥಿಗಳು: ಪರೀಕ್ಷೆಗೆ ಅವಕಾಶ ಕೋರಿ ಅರ್ಜಿ






ಕರಾವಳಿ ಗೂಪ್ ಆಫ್ ಕಾಲೇಜ್ ನ್ನು ನಡೆಸುತ್ತಿರುವ ಮಂಗಳೂರಿನ ಶಿಕ್ಷಣೋದ್ಯಮಿ ಗಣೇಶ್ ರಾವ್ ನೇತೃತ್ವದ ಜಿ.ಆರ್. ವೈದ್ಯಕೀಯ ಕಾಲೇಜಿನ 99 ವಿದ್ಯಾರ್ಥಿಗಳು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.



ವಿದ್ಯಾರ್ಥಿಗಳ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾ. ಜಿ. ನರೇಂದರ್ ಮತ್ತು ನ್ಯಾ. ವಿಜಯ ಕುಮಾರ್ ಎ. ಪಾಟೀಲ್ ಅವರಿದ್ದ ವಿಭಾಗೀಯ ಪೀಠ, ರಾಜ್ಯ ಸರ್ಕಾರ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತು ಜಿ.ಆರ್. ಕಾಲೇಜಿನ ಆಡಳಿತ ಮಂಡಳಿಗೆ ನೋಟೀಸ್ ಜಾರಿಗೊಳಿಸಿ ಆದೇಶ ಹೊರಡಿಸಿತು.



ಕಳೆದ ಸಾಲಿನ ವೈದ್ಯಕೀಯ ಕೋರ್ಸ್‌ಗೆ ವಿದ್ಯಾರ್ಥಿಗಳ ಪ್ರವೇಶವನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗವು ಅಕ್ರಮ ಎಂದು ಸಾರಿತ್ತು. ಈ ಆದೇಶವನ್ನು ಪ್ರಶ್ನಿಸಿ ತಮಗೆ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಕೋರಿ ಕಾಲೇಜಿನ 99 ವಿದ್ಯಾರ್ಥಿಗಳು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು.



ಅರ್ಜಿದಾರರು ತಮ್ಮ ವಿದ್ಯಾಭ್ಯಾಸ ಮುಂದುವರಿಕೆಗೆ ಅನುಕೂಲವಾಗುಂತೆ ಯಾವುದಾದರೂ ಸರ್ಕಾರಿ ಕಾಲೇಜಿಗೆ ತಮ್ಮನ್ನು ವರ್ಗಾವಣೆ ಮಾಡುವಂತೆ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ನಡೆಯಲಿರುವ ಪರೀಕ್ಷೆಗೆ ತಮಗೆ ಅವಕಾಶ ಕಲ್ಪಿಸುವಂತೆ ವಿದ್ಯಾರ್ಥಿಗಳು ಅರ್ಜಿಯಲ್ಲಿ ಹೈಕೋರ್ಟ್ ನ್ಯಾಯಪೀಠದ ಮುಂದೆ ಮೊರೆ ಇಟ್ಟಿದ್ದಾರೆ.


Ads on article

Advertise in articles 1

advertising articles 2

Advertise under the article

  

  

  

Join our WhatsApp Channel Powered By : Online Pudu