-->
ವಕೀಲರ ಲಾಕ್‌ಅಪ್ ಬಂಧನ: ರಾಜಾನುಕುಂಟೆ ಪೊಲೀಸರಿಬ್ಬರು ಸಸ್ಪೆಂಡ್- ಸಮಗ್ರ ತನಿಖೆಗೆ ಎಸ್‌ಪಿ ಭರವಸೆ

ವಕೀಲರ ಲಾಕ್‌ಅಪ್ ಬಂಧನ: ರಾಜಾನುಕುಂಟೆ ಪೊಲೀಸರಿಬ್ಬರು ಸಸ್ಪೆಂಡ್- ಸಮಗ್ರ ತನಿಖೆಗೆ ಎಸ್‌ಪಿ ಭರವಸೆ

ವಕೀಲರ ಲಾಕ್‌ಅಪ್ ಬಂಧನ: ರಾಜಾನುಕುಂಟೆ ಪೊಲೀಸರಿಬ್ಬರು ಸಸ್ಪೆಂಡ್- ಸಮಗ್ರ ತನಿಖೆಗೆ ಎಸ್‌ಪಿ ಭರವಸೆ





ಬೆಂಗಳೂರಿನ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ವಕೀಲರಿಬ್ಬರನ್ನು ಲಾಕ್‌ ಅಪ್‌ನಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡಿದ ಇಬ್ಬರು ಪೊಲೀಸ್ ಕಾನ್ಸ್‌ಟೆಬಲ್‌ ಗಳನ್ನು ಸಸ್ಪೆಂಡ್ ಮಾಡಲಾಗಿದೆ.



ಈ ವಿಷಯವನ್ನು ದೃಢಪಡಿಸಿರುವ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ಪ್ರಕರಣದಲ್ಲಿ ಪೊಲೀಸ್ ದೌರ್ಜನ್ಯದ ಬಗ್ಗೆ ತನಿಖೆ ಆರಂಭಿಸಲಾಗಿದೆ. ಸಮಗ್ರ ತನಿಖೆ ನಡೆಸುವ ಭರವಸೆಯನ್ನು ಪೊಲೀಸ್ ವರಿಷ್ಠಾಧಿಕಾರಿಯವರು ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.



ತಮ್ಮ ಕಕ್ಷಿದಾರರ ಪರವಾಗಿ ವಕೀಲರು ರಾಜಾನುಕುಂಟೆ ಪೊಲೀಸ್ ಠಾಣೆಗೆ ಹೋಗಿದ್ದರು. ಈ ಸಂದರ್ಭದಲ್ಲಿ ವಕೀಲರೊಂದಿಗೆ ಅನುಚಿತವಾಗಿ ವರ್ತಿಸಿದ ಪೊಲೀಸರು, ಅವರನ್ನು ಲಾಕ್‌ಅಪ್‌ನಲ್ಲಿ ಕೂಡಿ ಹಾಕಿ ದೌರ್ಜನ್ಯ ಮೆರೆದಿದ್ದಾರೆ. ಈ ದೃಶ್ಯಗಳು ವಾಟ್ಸ್ಯಾಪ್‌ನಲ್ಲಿ ಹರಿದಾಡಿದ್ದು, ವೈರಲ್ ಅಗಿದೆ.



ಘಟನೆಯ ಹಿನ್ನೆಲೆಯಲ್ಲಿ ವಕೀಲ ಸಮುದಾಯದಿಂದ ವ್ಯಾಪಕ ಆಕ್ರೋಶ ಕೇಳಿಬಂದಿದ್ದು, ತಕ್ಷಣ ಎಚ್ಚೆತ್ತುಕೊಂಡಿರುವ ಹಿರಿಯ ಅಧಿಕಾರಿಗಳು ಆರೋಪಿತ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.


Ads on article

Advertise in articles 1

advertising articles 2

Advertise under the article