-->
ಮೂಲ ಮಾಲಕರ ಉತ್ತರಾಧಿಕಾರಿಗಳನ್ನು ಪ್ರತಿವಾದಿ ಮಾಡಿದ್ದರೆ ಭೂನ್ಯಾಯ ಮಂಡಳಿ ಆದೇಶ ಸಮರ್ಥನೀಯವಲ್ಲ- ಹೈಕೋರ್ಟ್ ಆದೇಶ

ಮೂಲ ಮಾಲಕರ ಉತ್ತರಾಧಿಕಾರಿಗಳನ್ನು ಪ್ರತಿವಾದಿ ಮಾಡಿದ್ದರೆ ಭೂನ್ಯಾಯ ಮಂಡಳಿ ಆದೇಶ ಸಮರ್ಥನೀಯವಲ್ಲ- ಹೈಕೋರ್ಟ್ ಆದೇಶ

ಮೂಲ ಮಾಲಕರ ಉತ್ತರಾಧಿಕಾರಿಗಳನ್ನು ಪ್ರತಿವಾದಿ ಮಾಡಿದ್ದರೆ ಭೂನ್ಯಾಯ ಮಂಡಳಿ ಆದೇಶ ಸಮರ್ಥನೀಯವಲ್ಲ- ಹೈಕೋರ್ಟ್ ಆದೇಶ





ಗೇಣಿದಾರರಿಗೆ ಅನುಭೋಗದ (ಆಕ್ಯುಪೆನ್ಸಿ ರೈಟ್ಸ್‌) ಹಕ್ಕುಗಳನ್ನು ನೀಡುವ ಆದೇಶದಲ್ಲಿ ಮೂಲ ಮಾಲೀಕರ ಕಾನೂನಾತ್ಮಕ ಉತ್ತರಾಧಿಕಾರಿಗಳನ್ನು ಪಕ್ಷಕಾರರನ್ನಾಗಿ ಮಾಡದಿದ್ದರೆ, ಅಂತಹ ಆದೇಶ ಸಮರ್ಥನೀಯವಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.


"ಡಾ. ಕೆ. ರವೀಂದ್ರನಾಥ ಶೆಟ್ಟಿ ಮತ್ತಿತರರು Vs ಕರ್ನಾಟಕ ರಾಜ್ಯ ಮತ್ತಿತರರು" ಪ್ರಕರಣದಲ್ಲಿ ಅರ್ಜಿದಾರರು ಸಲ್ಲಿಸಿದ ಮೇಲ್ಮನವಿಯನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾ. ಎನ್. ಎಸ್. ಸಂಜಯ್ ಗೌಡ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಹೊರಡಿಸಿದೆ.


ಮೂಲ ಮಾಲಕರು ಮೃತಪಟ್ಟಿದ್ದು, ಅವರ ಕಾನೂನು ಉತ್ತರಾಧಿಕಾರಿಗಳನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿಲ್ಲ. ಇದರಿಂದ ನ್ಯಾಯದಾನದ ಪ್ರಕ್ರಿಯೆಯಲ್ಲಿ ಅವರು ಪಾಲ್ಗೊಳ್ಳುವ ಅವರ ಹಕ್ಕನ್ನು ಮೊಟಕುಗೊಳಿಸಿದಂತಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.


ಅವರನ್ನು ಪ್ರತಿವಾದಿಗಳನ್ನಾಗಿ ಮಾಡದೆ ಅವರಿಗೆ ತಕರಾರನ್ನು ಸಲ್ಲಿಸಲು ಸಾಧ್ಯವಾಗಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ಗೇಣಿದಾರರ ಪರವಾಗಿ ಭೂಮಿಗೆ ಸಂಬಂಧಿಸಿದಂತೆ ಸ್ವಾಧೀನದ ಹಕ್ಕನ್ನು ನೀಡಿದ್ದ ಭೂ ನ್ಯಾಯಮಂಡಳಿಯ ಆದೇಶವನ್ನು ರದ್ದುಗೊಳಿಸಿದೆ.


ಭೂ ಮಾಲಕರ ವಾರಿಸುದಾರರಾದ ಅರ್ಜಿದಾರರ ತಕರಾರನ್ನು ಆಲಿಸಲು ಮತ್ತು ಅವರ ಪರವಾಗಿ ಸಾಕ್ಷ್ಯವನ್ನು ಮುನ್ನಡೆಸಲು ಸೂಕ್ತ ಅವಕಾಶವನ್ನು ನೀಡುವಂತೆ ಹೈಕೋರ್ಟ್ ಭೂ ನ್ಯಾಯಮಂಡಳಿಗೆ ನಿರ್ದೇಶನ ನೀಡಿದ್ದು, ಸೂಕ್ತ ಕಾನೂನು ಪ್ರಕ್ರಿಯೆಯನ್ನು ಪೂರೈಸಿದ ಬಳಿಕವೇ ಸಮರ್ಪಕ ಆದೇಶ ಹೊರಡಿಸುವಂತೆ ಹೈಕೋರ್ಟ್ ನಿರ್ದೇಶನದಲ್ಲಿ ತಿಳಿಸಿದೆ.


ಪ್ರಕರಣದ ವಿವರ:

ಮೂಲ ಮಾಲೀಕರು 1974ರಲ್ಲೇ ನಿಧನರಾಗಿರುತ್ತಾರೆ. ಅವರಿಗೆ ಸೇರಿದ 63 ಸೆಂಟ್ಸ್ ಜಮೀನಿಗೆ ಸಂಬಂಧಿಸಿದಂತೆ ಅನುಭೋಗದ ಹಕ್ಕು ಪಡೆದಿರುವ ಹಿಡುವಳಿದಾರರು ಭೂ ನ್ಯಾಯಮಂಡಳಿಯಲ್ಲಿ ಅರ್ಜಿ ಹಾಕಿದ್ದರು.


ಆ ಸಂದರ್ಭದಲ್ಲಿ ಮೂಲ ಮಾಲಕರು ಮೃತಪಟ್ಟಿದ್ದರೂ ಅವರ ಕಾನೂನಾತ್ಮಕ ವಾರಿಸುದಾರರನ್ನು ಪ್ರತಿವಾದಿಗಳನ್ನಾಗಿ ಮಾಡದೆ ಮೃತ ಮಾಲಕರನ್ನೇ ಪ್ರತಿವಾದಿಯನ್ನಾಗಿ ಮಾಡಲಾಗಿತ್ತು. ಭೂ ನ್ಯಾಯಮಂಡಳಿಗೆ ಪ್ರತಿವಾದಿಗಳು ಮೃತಪಟ್ಟಿರುವ ಮಾಹಿತಿಯನ್ನು ಮುಚ್ಚಿಡಲಾಗಿದೆ ಮತ್ತು ಕಾನೂನಾತ್ಮಕ ವಾರಿಸುದಾರರಾದ ತಮಗೆ ತಕರಾರು ಸಲ್ಲಿಸಲು ಸಾಧ್ಯವಾಗಿಲ್ಲ ಮತ್ತು ನಮ್ಮ ಪರವಾಗಿ ಸಾಕ್ಷ್ಯ ನೀಡಲು ಸಮರ್ಪಕ ಅವಕಾಶ ದೊರೆತಿಲ್ಲ ಎಂದು ವಾದಿಸಿದ್ದರು.



Ads on article

Advertise in articles 1

advertising articles 2

Advertise under the article