![ರಾಮ ಮಂದಿರ ಲೋಕಾರ್ಪಣೆ: ರಜೆ ಘೋಷಣೆ ಮಾಡುವಂತೆ ಸುಪ್ರೀಂ ಕೋರ್ಟ್ಗೆ ವಕೀಲರ ಮನವಿ ರಾಮ ಮಂದಿರ ಲೋಕಾರ್ಪಣೆ: ರಜೆ ಘೋಷಣೆ ಮಾಡುವಂತೆ ಸುಪ್ರೀಂ ಕೋರ್ಟ್ಗೆ ವಕೀಲರ ಮನವಿ](https://blogger.googleusercontent.com/img/b/R29vZ2xl/AVvXsEhHScUqC6Sw7eeVLDozEplfpxF0p9c1cveop205qZZ3Ivh734cUod3URBydIRUmf5ClEs1HcUUT72Vtv6c8ASaG-KIKiSVDdDTg19_7DWJOdZW3huk_wApJ-0R5sLSBDVHo4IR2Mm9uZgOOZ_S-jcSpS9fjMqSi56Jy8jITDPPqF4qhVIn5BME_9OG7lauN/w640-h622/Logo_of_Bar_Council_of_India.png)
ರಾಮ ಮಂದಿರ ಲೋಕಾರ್ಪಣೆ: ರಜೆ ಘೋಷಣೆ ಮಾಡುವಂತೆ ಸುಪ್ರೀಂ ಕೋರ್ಟ್ಗೆ ವಕೀಲರ ಮನವಿ
Thursday, January 18, 2024
ರಾಮ ಮಂದಿರ ಲೋಕಾರ್ಪಣೆ: ರಜೆ ಘೋಷಣೆ ಮಾಡುವಂತೆ ಸುಪ್ರೀಂ ಕೋರ್ಟ್ಗೆ ವಕೀಲರ ಮನವಿ
ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಲೋಕಾರ್ಪಣೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೋರ್ಟ್ ಕಲಾಪಕ್ಕೆ ರಜೆ ಘೋಷಣೆ ಮಾಡುವಂತೆ ಸುಪ್ರೀಂ ಕೋರ್ಟ್ಗೆ ಭಾರತೀಯ ವಕೀಲರ ಪರಿಷತ್ತು ಮನವಿ ಮಾಡಿದೆ.
ಬಿಸಿಐ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಅವರು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಅಯೋಧ್ಯೆಯಲ್ಲಿ ರಾಮ ಲಲ್ಲಾ ಪ್ರತಿಷ್ಠಾಪನೆಯು ಸಾಂಸ್ಕೃತಿಕವಾಗಿ ಮತ್ತು ರಾಷ್ಟ್ರೀಯವಾಗಿ ಮಹತ್ವದ ಪಡೆದಿರುವುದರಿಂದ ಈ ದಿನವನ್ನು ರಜಾ ದಿನ ಎಂದು ಘೋಷಿಸಬೇಕು ಎಂದು ಅವರು ಪತ್ರದಲ್ಲಿ ಕೋರಿಕೊಂಡಿದ್ದಾರೆ.
ದೇಶಾದ್ಯಂತ ವಕೀಲರು ಅಯೋಧ್ಯೆಯಲ್ಲಿ ಮತ್ತು ದೇಶದ ವಿವಿಧೆಡೆ ನಡೆಯುವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಈ ದಿನದಂದು ರಜೆ ಘೋಷಿಸಬೇಕು ಎಂದು ಅವರು ಪತ್ರದಲ್ಲಿ ಮನವಿ ಮಾಡಿದ್ಧಾರೆ.