![ಕೊಲೆ ಯತ್ನ: ಹೈಕೋರ್ಟ್ ಮಾಜಿ ನ್ಯಾಯಮೂರ್ತಿ ವಿರುದ್ಧ ಕೇಸು ದಾಖಲು ಕೊಲೆ ಯತ್ನ: ಹೈಕೋರ್ಟ್ ಮಾಜಿ ನ್ಯಾಯಮೂರ್ತಿ ವಿರುದ್ಧ ಕೇಸು ದಾಖಲು](https://blogger.googleusercontent.com/img/b/R29vZ2xl/AVvXsEjygZqsmBpl2H6c9m3xAFT5RHt4GLFJygUPr5Wv2Hg53ZeCsYpCaQhDbtv9OSQwd8GnqtqK2Vv9Np9RFCcEtBmAUxnUC5-W4E_ATZQyASAgaxH1sxJ0u2HI9DCwW4lx_zkQiOfSnkBz_FrQzYLDPPgQx5DQPBnjWjd4kJaLKScyx6lPwSpdjkwtuHoTyjJV/w640-h418/Police-2.jpg)
ಕೊಲೆ ಯತ್ನ: ಹೈಕೋರ್ಟ್ ಮಾಜಿ ನ್ಯಾಯಮೂರ್ತಿ ವಿರುದ್ಧ ಕೇಸು ದಾಖಲು
ಕೊಲೆ ಯತ್ನ: ಹೈಕೋರ್ಟ್ ಮಾಜಿ ನ್ಯಾಯಮೂರ್ತಿ ವಿರುದ್ಧ ಕೇಸು ದಾಖಲು
ಕೊಲೆ ಯತ್ನದ ಆರೋಪದ ಮೇಲೆ ಹೈಕೋರ್ಟ್ನ ಮಾಜಿ ನ್ಯಾಯಮೂರ್ತಿ ವಿರುದ್ಧ ಪ್ರಕರಣ ದಾಖಲಾಗಿರುವ ಘಟನೆ ಪಶ್ಚಿಮ ಬಂಗಾಳದ ಮಿಡ್ನಾಪುರದಲ್ಲಿ ನಡೆದಿದೆ.
ಕೊಲ್ಕತ್ತಾ ಹೈಕೋರ್ಟ್ ಮಾಜಿ ನ್ಯಾಯಮೂರ್ತಿ ಹಾಗೂ ಬಿಜೆಪಿಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಅಭಿಜಿತ್ ಗಂಗೋಪಾಧ್ಯಾಯ ಅವರೇ ಕೊಲೆ ಯತ್ನ ಆರೋಪ ಎದುರಿಸುತ್ತಿರುವ ಆರೋಪಿ. ಇವರ ವಿರುದ್ಧ ಪೂರ್ವ ಮಿಡ್ನಾಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕೊಲ್ಕತ್ತಾ ಹೈಕೋರ್ಟ್ ಆದೇಶದಿಂದ ಕೆಲಸ ಕಳೆದುಕೊಂಡ ಸಾವಿರಾರು ಶಿಕ್ಷಕಕರು ಪ್ರತಿಭಟನೆ ನಡೆಸುತ್ತಿದ್ದರು. ಈ ಪ್ರತಿಭಟನಾ ನಿರತರ ಮೇಲೆ ಅಭಿಜಿತ್ ಗಂಗೋಪಾಧ್ಯಾಯ ಅವರೊಂದಿಗೆ ಮೆರವಣಿಗೆಯಲ್ಲಿ ಬಂದವರು ದಾಳಿ ನಡೆಸಿ ಹಲ್ಲೆ ಮಾಡಿದ್ದಾರೆ ಎಂದು ತೃಣಮೂಲ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಮೈದುಲ್ ಇಸ್ಲಾಂ ಆರೋಪಿಸಿದ್ದಾರೆ.
ಅವರು ನೀಡಿದ ದೂರಿನ ಆಧಾರದಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಆದರೆ, ಇದೊಂದು ಸುಳ್ಳು ದೂರು. ಪ್ರಕರಣ ದಾಖಲಿಸಿದವರ ವಿರುದ್ಧ ಹಲವು ಕೇಸುಗಳು ಬಾಕಿ ಇವೆ ಎಂದು ಆರೋಪಿ ನ್ಯಾ. ಅಭಿಜಿತ್ ಗಂಗೋಪಾಧ್ಯಾಯ ಪ್ರತ್ಯಾರೋಪ ಮಾಡಿದ್ಧಾರೆ.