-->
ಚೆಕ್ ಅಮಾನ್ಯ ಪ್ರಕರಣ: ಬ್ಯಾಂಕ್ ಮ್ಯಾನೇಜರ್ ಹಾಜರಾತಿ ಕಡ್ಡಾಯವಲ್ಲ- ಹೈಕೋರ್ಟ್ ತೀರ್ಪು

ಚೆಕ್ ಅಮಾನ್ಯ ಪ್ರಕರಣ: ಬ್ಯಾಂಕ್ ಮ್ಯಾನೇಜರ್ ಹಾಜರಾತಿ ಕಡ್ಡಾಯವಲ್ಲ- ಹೈಕೋರ್ಟ್ ತೀರ್ಪು

ಚೆಕ್ ಅಮಾನ್ಯ ಪ್ರಕರಣ: ಬ್ಯಾಂಕ್ ಮ್ಯಾನೇಜರ್ ಹಾಜರಾತಿ ಕಡ್ಡಾಯವಲ್ಲ- ಹೈಕೋರ್ಟ್ ತೀರ್ಪು





ಚೆಕ್ ಬೌನ್ಸ್ ಪ್ರಕರಣದ ಕೋರ್ಟ್ ವಿಚಾರಣೆಯಲ್ಲಿ ಬ್ಯಾಂಕ್ ಪರವಾಗಿ ಅದರ ಮ್ಯಾನೇಜರ್ ಹಾಜರಾತಿ ಕಡ್ಡಾಯವಾಗಿ ಅಗತ್ಯವಲ್ಲ. ಮ್ಯಾನೇಜರ್ ಅವರ ಬದಲಿಗೆ, ಬ್ಯಾಂಕಿನ ಅಧಿಕಾರ ಪತ್ರ ಹೊಂದಿರುವ ಅದರ ಅಧಿಕೃತ ಅಧಿಕಾರಿ ಸಾಕ್ಷ್ಯ ನೀಡಬಹುದು ಎಂದು ಜಮ್ಮು ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್ ತೀರ್ಪು ನೀಡಿದೆ.


ಜಮ್ಮು ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್‌ನ ನ್ಯಾಯಮೂರ್ತಿ ಸಂಜಯ್ ಧರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.


ಇಂತಹ ಪ್ರಕರಣಗಳಲ್ಲಿನ ಸಾಕ್ಷ್ಯಗಳು ಅಧಿಕೃತ ಬ್ಯಾಂಕ್ ದಾಖಲೆಗಳನ್ನು ಆಧರಿಸಿರುವುದರಿಂದ, ಶಾಖಾ ವ್ಯವಸ್ಥಾಪಕರು ವೈಯಕ್ತಿಕವಾಗಿ ಸಾಕ್ಷ್ಯ ನುಡಿಯುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.


ಚೆಕ್ ಬೌನ್ಸ್ ಪ್ರಕರಣಗಳ ವಿಚಾರಣೆಯ ಸಮಯದಲ್ಲಿ ಬ್ಯಾಂಕಿನ ಶಾಖಾ ವ್ಯವಸ್ಥಾಪಕರು ವೈಯಕ್ತಿಕವಾಗಿ ಹಾಜರಾಗುವುದು ಕಡ್ಡಾಯವಲ್ಲ. ಸಾಮಾನ್ಯ ಹಾಗೂ ದೈನಂದಿನ ಬ್ಯಾಂಕಿಂಗ್ ವ್ಯವಹಾರಗಳಲ್ಲಿ ಬ್ಯಾಂಕಿನ ಸಂಬಂಧಿತ ದಾಖಲೆಗಳಿಗೆ ಪರಿಶೀಲಿಸುವ ಅಧಿಕಾರ ಹೊಂದಿರುವ ಯಾವುದೇ ಅಧಿಕೃತ ಬ್ಯಾಂಕ್ ಅಧಿಕಾರಿ ಸಮರ್ಥವಾಗಿ ಸಾಕ್ಷ್ಯ ನೀಡಬಹುದು ಎಂದು ಜಮ್ಮು ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ.


ಪ್ರಕರಣ: ಇಫ್ತೀಕಾರ್ ಅಶ್ರಫ್ ಟ್ರುಮ್‌ಬೂ Vs ಫುರ್ಖಾನ್ ಅಹ್ಮದ್ ರಾಥರ್

ಜಮ್ಮು ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್ Dated 26-05-2025



Ads on article

Advertise in articles 1

advertising articles 2

Advertise under the article