ಭೂ ಸುಧಾರಣಾ ಕಾಯ್ದೆ: ನ್ಯಾಯಮಂಡಳಿ ಆದೇಶದ ಸಿಂಧುತ್ವ ನಿರ್ಧರಿಸಲು ಸಿವಿಲ್ ಕೋರ್ಟ್ಗೆ ನ್ಯಾಯವ್ಯಾಪ್ತಿ ಇಲ್ಲ- ಕರ್ನಾಟಕ ಹೈಕೋರ್ಟ್
Sunday, September 14, 2025
ಭೂ ಸುಧಾರಣಾ ಕಾಯ್ದೆ: ನ್ಯಾಯಮಂಡಳಿ ಆದೇಶದ ಸಿಂಧುತ್ವ ನಿರ್ಧರಿಸಲು ಸಿವಿಲ್ ಕೋರ್ಟ್ಗೆ ನ್ಯಾಯವ್ಯಾಪ್ತಿ ಇಲ್ಲ- ಕರ್ನಾಟಕ ಹೈಕೋರ್ಟ್
ಭೂ ಸುಧಾರಣಾ ಕಾಯ್ದೆ ಅಡಿಯಲ್ಲಿ ಭೂ ನ್ಯಾಯಮಂಡಳಿ ಮಾಡಿದ ಆದೇಶದ ಸಿಂಧುತ್ವ ನಿರ್ಧರಿಸಲು ಸಿವಿಲ್ ಕೋರ್ಟ್ಗೆ ನ್ಯಾಯವ್ಯಾಪ್ತಿ ಇಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.
ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಭೂ ಸುಧಾರಣಾ ಕಾಯ್ದೆ ಅಡಿಯಲ್ಲಿ ಭೂ ನ್ಯಾಯಮಂಡಳಿ ನೀಡಿದ ಆದೇಶದ ಸಿಂಧುತ್ವ ನಿರ್ಧರಿಸುವ ಅಧಿಕಾರ ಸಿವಿಲ್ ನ್ಯಾಯಾಲಯಕ್ಕೆ ಇಲ್ಲ. ಭೂ ಸುಧಾರಣಾ ಕಾಯ್ದೆಯಲ್ಲಿ ಇದಕ್ಕೆ ನಿಷೇಧ ಇದೆ ಎಂದು ಹೈಕೋರ್ಟ್ ನ್ಯಾಯಪೀಠ ಹೇಳಿದೆ.
ಒಂದು ವೇಳೆ, ಸಿವಿಲ್ ನ್ಯಾಯಾಲಯವು ಭೂ ನ್ಯಾಯ ಮಂಡಳಿಯ ಆದೇಶವನ್ನು ರದ್ದುಪಡಿಸಿದ್ದಲ್ಲಿ ಸದರಿ ಆದೇಶವು ಕಾನೂನಿನಡಿ ಊರ್ಜಿತವಲ್ಲ ಎಂದು ನ್ಯಾಯಪೀಠ ಹೇಳಿದೆ.