
ಜಾಮೀನು ಪ್ರಕರಣಗಳಲ್ಲಿ ಗಂಭೀರ ಲೋಪ: ಇಬ್ಬರು ನ್ಯಾಯಾಧೀಶರಿಗೆ ಕಡ್ಡಾಯ ತರಬೇತಿ- ಸುಪ್ರೀಂ ನಿರ್ದೇಶನ
ಜಾಮೀನು ಪ್ರಕರಣಗಳಲ್ಲಿ ಗಂಭೀರ ಲೋಪ: ಇಬ್ಬರು ನ್ಯಾಯಾಧೀಶರಿಗೆ ಕಡ್ಡಾಯ ತರಬೇತಿ- ಸುಪ್ರೀಂ ನಿರ್ದೇಶನ
ಜಾಮೀನು ಪ್ರಕರಣಗಳಲ್ಲಿ ನೀಡದಲಾದ ಆದೇಶದಲ್ಲಿ ಗಂಭೀರ ಲೋಪ ಎಸಗಿದ ಇಬ್ಬರು ನ್ಯಾಯಾಧೀಶರಿಗೆ ಏಳು ದಿನಗಳ ಕಡ್ಡಾಯ ತರಬೇತಿ ಪಡೆಯಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ ಅಪರೂಪದ ಘಟನೆ ನಡೆದಿದೆ.
ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್(ಎಸಿಎಂಎಂ) ಮತ್ತು ಸೆಷನ್ಸ್ ನ್ಯಾಯಾಧೀಶರು ದೆಹಲಿ ನ್ಯಾಯಾಂಗ ಅಕಾಡೆಮಿಯಲ್ಲಿ ತರಬೇತಿ ಪಡೆಯಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ.
ಆರೋಪಿ ದಂಪತಿ ಶಿಕ್ಷಾ ರಾಥೋಡ್ ಮತ್ತು ಅವರ ಪತಿ ಪರವಾಗಿ ಬಂದಿರುವ ಸರಣಿ ಜಾಮೀನು ಆದೇಶಗಳ ವಿರುದ್ಧ ನೆಟ್ಸಿಟಿ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದ ಸುಪ್ರೀಂ ಕೋರ್ಟ್ ಈ ಆದೇಶ ಹೊರಡಿಸಿದೆ.
ನ್ಯಾಯಾಂಗ ಪ್ರಕ್ರಿಯೆಗಳನ್ನು ಹೇಗೆ ನಡೆಸುವುದು ಎಂಬುದರ ಕುರಿತು ತರಬೇತಿ ಪಡೆಯಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವಂತೆ ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರನ್ನು ಸುಪ್ರೀಂ ಕೋರ್ಟ್ ಕೇಳಿಕೊಂಡಿದೆ.
2023ರ ನವೆಂಬರ್ 10 ಮತ್ತು 2024ರ ಆಗಸ್ಟ್ 16ರಂದು ವಿವಾದಿತ ಜಾಮೀನು ಆದೇಶಗಳನ್ನು ಹೊರಡಿಸಿದ್ದ ನ್ಯಾಯಾಧೀಶರು ಕನಿಷ್ಟ 7 ದಿನಗಳ ಅವಧಿಗೆ ವಿಶೇಷ ನ್ಯಾಯಾಂಗ ತರಬೇತಿಗೆ ಒಳಗಾಗಬೇಕು ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.