ವಾರೆಂಟ್ಗಳ ಜಾರಿಗೊಳಿಸುವಿಕೆ ಖಚಿತಪಡಿಸುವುದು ನ್ಯಾಯಾಲಯದ ಕರ್ತವ್ಯ: ಕರ್ನಾಟಕ ಹೈಕೋರ್ಟ್
ವಾರೆಂಟ್ಗಳ ಜಾರಿಗೊಳಿಸುವಿಕೆ ಖಚಿತಪಡಿಸುವುದು ನ್ಯಾಯಾಲಯದ ಕರ್ತವ್ಯ: ಕರ್ನಾಟಕ ಹೈಕೋರ್ಟ್
ವಿಚಾರಣೆ ನಡೆಸದೇ ಇದ್ದ ಕಾರಣಕ್ಕೆ ದೂರನ್ನು ವಜಾಗೊಳಿಸುವುದು ಸಮರ್ಥನೀಯವಲ್ಲ. ಅಂತಹ ಆದೇಶಗಳನ್ನು ಹೊರಡಿಸುವ ಮೊದಲು ಜಾಮೀನು ರಹಿತ ವಾರೆಂಟ್ಗಳನ್ನು ಜಾರಿಗೊಳಿಸುವಿಕೆ ಖಚಿತಪಡಿಸುವುದು ನ್ಯಾಯಾಲಯದ ಕರ್ತವ್ಯ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.
ಗಣೇಶ್ ಸಾಯಿ ಫೈನಾನ್ಸ್ ವಿರುದ್ಧ ಯತೀಂದ್ರ ಪಟೇಲ್ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ನ ಮಾನ್ಯ ನ್ಯಾಯಮೂರ್ತಿ ಜಿ. ಬಸವರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.
ಜಾರಿ ಮಾಡಲು ನೀಡಲಾದ ಜಾಮೀನು ರಹಿತ ವಾರೆಂಟ್ಗಳ ಜಾರಿಗೊಳಿಸುವಿಕೆಯನ್ನು ಖಚಿತಪಡಿಸಿಕೊಳ್ಳದೆ, ವಿಚಾರಣೆ ನಡೆಸದೇ ಇದ್ದದ್ದಕ್ಕಾಗಿ ದೂರನ್ನು ವಜಾಗೊಳಿಸುವುದು ಸಮರ್ಥನೀಯವಲ್ಲ. ಅಂತಹ ಆದೇಶಗಳ ಜಾರಿಗೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳುವುದು ನ್ಯಾಯಾಲಯದ ಕರ್ತವ್ಯವಾಗಿದೆ ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣದ ಶೀರ್ಷಿಕೆ: ಗಣೇಶ್ ಸಾಯಿ ಫೈನಾನ್ಸ್ ವಿರುದ್ಧ ಯತೀಂದ್ರ ಪಟೇಲ್
ಕರ್ನಾಟಕ ಹೈಕೋರ್ಟ್, Crl A. 350/2025 Dated 6-11-2025