-->
ಜಾಮೀನು ಅರ್ಜಿ ಸಲ್ಲಿಸುವಾಗ ಪೂರ್ವ ವಕೀಲರ ನಿರಪೇಕ್ಷಣೆ, ವಕಾಲತ್‌ನಾಮ ಸಲ್ಲಿಸುವುದು ಕಡ್ಡಾಯವಲ್ಲ: ಅಲಹಾಬಾದ್ ಹೈಕೋರ್ಟ್‌

ಜಾಮೀನು ಅರ್ಜಿ ಸಲ್ಲಿಸುವಾಗ ಪೂರ್ವ ವಕೀಲರ ನಿರಪೇಕ್ಷಣೆ, ವಕಾಲತ್‌ನಾಮ ಸಲ್ಲಿಸುವುದು ಕಡ್ಡಾಯವಲ್ಲ: ಅಲಹಾಬಾದ್ ಹೈಕೋರ್ಟ್‌

ಜಾಮೀನು ಅರ್ಜಿ ಸಲ್ಲಿಸುವಾಗ ಪೂರ್ವ ವಕೀಲರ ನಿರಪೇಕ್ಷಣೆ, ವಕಾಲತ್‌ನಾಮ ಸಲ್ಲಿಸುವುದು ಕಡ್ಡಾಯವಲ್ಲ: ಅಲಹಾಬಾದ್ ಹೈಕೋರ್ಟ್‌





ದಂಡ ಪ್ರಕ್ರಿಯೆ ಸಂಹಿತೆಯ ಅಡಿಯಲ್ಲಿ ಆರೋಪಿ ಪರ ಜಾಮೀನು ಅರ್ಜಿ ಸಲ್ಲಿಸುವಾಗ ಈ ಹಿಂದೆ ಆರೋಪಿಯನ್ನು ಪ್ರತಿನಿಧಿಸಿದ್ದ ವಕೀಲರ ನಿರಪೇಕ್ಷಣೆ ಅಥವಾ ವಕಾಲತ್‌ನಾಮ ಸಲ್ಲಿಸುವುದು ಕಡ್ಡಾಯವಲ್ಲ ಎಂದು ಅಲಹಾಬಾದ್ ಹೈಕೋರ್ಟ್‌ ತೀರ್ಪು ನೀಡಿದೆ.


ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ರಾಜೇಶ್ ಸಿಂಗ್ ಚೌಹಾಣ್ ಮತ್ತು ನ್ಯಾಯಮೂರ್ತಿ ಅಬ್ದೇಶ್ ಕುಮಾರ್ ಚೌಧರಿ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದ್ದು, ವರದಕ್ಷಿಣೆ ಸಾವು ಪ್ರಕರಣದಲ್ಲಿ 13 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಶ್ರೀಮತಿ ಮನೋರಮಾ ಶುಕ್ಲಾ ಅವರಿಗೆ ಜಾಮೀನು ಮಂಜೂರು ಮಾಡಿದ ಹೈಕೋರ್ಟ್ ಈ ತೀರ್ಪು ನೀಡಿದೆ.


ಜ್ಯೋತಿ ರಜಪೂತ್ ಎಂಬ ವಕೀಲರು ಎನ್‌ಜಿಓ ಪರವಾಗಿ ಅರ್ಜಿದಾರ ಮಹಿಳೆ ಪರವಾಗಿ ನ್ಯಾಯಪೀಠದ ಮುಂದೆ ಕಲಾಪದಲ್ಲಿ ಭಾಗವಹಿಸಿದ್ದರು. ಹಿಂದಿನ ವಕೀಲರು ನಿರಪೇಕ್ಷಣ ಪತ್ರ (ಎನ್‌ಓಸಿ)ಯನ್ನು ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಅವರು ಅರ್ಜಿದಾರರನ್ನು ಪ್ರತಿನಿಧಿಸಿದ್ದರು.


ಈ ಸಂದರ್ಭದಲ್ಲಿ ನ್ಯಾಯಪೀಠ ಪ್ರಮುಖ ಮಾರ್ಗಸೂಚಿಯನ್ನು ಹೊರಡಿಸಿತು.

ರೆಗ್ಯೂಲರ್ ಜಾಮೀನು, ನಿರೀಕ್ಷಣಾ ಜಾಮೀನು ಅಥವಾ ಶಿಕ್ಷೆಯನ್ನು ಅಮಾನತ್ತಿನಲ್ಲಿಡಲು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ವಕಾಲತ್‌ನಾಮ ಸಲ್ಲಿಸುವುದು ಕಡ್ಡಾಯವಲ್ಲ.


ಸಂವಿಧಾನದ 22(1)ನೇ ವಿಧಿಯಡಿ ಮತ್ತು ದಂಡ ಪ್ರಕ್ರಿಯಾ ಸಂಹಿತೆಯ 303 ಮತ್ತು 41-D ಸೆಕ್ಷನ್‌ಗಳ ಅಡಿಯಲ್ಲಿ ಆರೋಪಿಗೆ ತನ್ನ ಇಚ್ಚೆಯ ವಕೀಲರ ಮೂಲಕ ನ್ಯಾಯಾಲಯದಲ್ಲಿ ತನ್ನ ಪ್ರಕರಣವನ್ನು ಪ್ರತಿನಿಧಿಸುವುದು ಆತನ ಸಂವಿಧಾನಿಕ ಹಕ್ಕು.


ನಿರಪೇಕ್ಷಣ ಪತ್ರ ಎನ್ನುವುದು ಒಂದು ಉತ್ತಮ ವೃತ್ತಿ ಹವ್ಯಾಸ. ಆದರೆ, ಅದು ಕಾನೂನು ಅಲ್ಲ.



Ads on article

Advertise in articles 1

advertising articles 2

Advertise under the article