ಆರೋಪಪಟ್ಟಿಯಲ್ಲಿ ಗಂಭೀರ ಮೂರ್ಖತನ: ಪೊಲೀಸ್ ಅಧಿಕಾರಿ ವಿರುದ್ಧ ಇಲಾಖಾ ತನಿಖೆಗೆ ಕರ್ನಾಟಕ ಹೈಕೋರ್ಟ್ ಆದೇಶ
Thursday, June 4, 2026
ಆರೋಪಪಟ್ಟಿಯಲ್ಲಿ ಗಂಭೀರ ಮೂರ್ಖತನ: ಪೊಲೀಸ್ ಅಧಿಕಾರಿ ವಿರುದ್ಧ ಇಲಾಖಾ ತನಿಖೆಗೆ ಕರ್ನಾಟಕ ಹೈಕೋರ್ಟ್ ಆದೇಶ
ಪತ್ನಿಯ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣವೊಂದರಲ್ಲಿ ದೋಷಪೂರಿತ ಆರೋಪ ಪಟ್ಟಿ ಸಲ್ಲಿಸಿದ ಪೊಲೀಸ್ ಅಧಿಕಾರಿ ಗಂಭೀರ ಮೂರ್ಖತನ ತೋರಿದ್ದಾರೆ ಎಂದು ಕರ್ನಾಟಕ ಹೈಕೋರ್ಟ್ ತೀಕ್ಷ್ಣ ಶಬ್ಧಗಳಿಂದ ಖಂಡಿಸಿದ್ದು, ಅವರ ವಿರುದ್ಧ ಇಲಾಖಾ ವಿಚಾರಣೆ ನಡೆಸಿ ಮೂರು ತಿಂಗಳಲ್ಲಿ ವರದಿ ನೀಡುವಂತೆ ಇಲಾಖೆಗೆ ತಾಕೀತು ಮಾಡಿದೆ.
ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಹೊರಡಿಸಿದ್ದು, ಅರ್ಜಿದಾರ ಪತಿ ಮತ್ತು ಎರಡನೇ ಎದುರುದಾರ ಪತ್ನಿ ನಡುವಿನ ರಾಜಿ ಸಂಧಾನ ಏರ್ಪಟ್ಟಿರುವುದನ್ನು ಪರಿಗಣಿಸಿ ಅರ್ಜಿದಾರ ಪತಿಯ ವಿರುದ್ಧ ದಾಖಲಾದ ಪ್ರಕರಣವನ್ನು ರದ್ದುಪಡಿಸಿ ಆದೇಶ ಹೊರಡಿಸಿತು.
ಪ್ರಕರಣದ ಶೀರ್ಷಿಕೆ: ನಿಕ್ಸನ್ ವಿರುದ್ಧ ರಾಜ್ಯ (ಬಾಣಸವಾಡಿ ಪೊಲೀಸ್ ಠಾಣೆ) ಮತ್ತಿತರರು
ಕರ್ನಾಟಕ ಹೈಕೋರ್ಟ್, Crl.Pet. 5622/2026 Dated 17-04-2026