-->
ವಿವಾದ ಇಲ್ಲದ ದಾಖಲೆಯ ಸಹಿ ರುಜು ಅಗತ್ಯವಿಲ್ಲ, ಆದರೆ, ನ್ಯಾಯಾಲಯದ ವಿವೇಚನೆಗೆ ಬಿಟ್ಟದ್ದು!

ವಿವಾದ ಇಲ್ಲದ ದಾಖಲೆಯ ಸಹಿ ರುಜು ಅಗತ್ಯವಿಲ್ಲ, ಆದರೆ, ನ್ಯಾಯಾಲಯದ ವಿವೇಚನೆಗೆ ಬಿಟ್ಟದ್ದು!

ವಿವಾದ ಇಲ್ಲದ ದಾಖಲೆಯ ಸಹಿ ರುಜು ಅಗತ್ಯವಿಲ್ಲ, ಆದರೆ, ನ್ಯಾಯಾಲಯದ ವಿವೇಚನೆಗೆ ಬಿಟ್ಟದ್ದು!




ಪ್ರಕರಣದಲ್ಲಿ ಹಾಜರುಪಡಿಸಲಾದ ಯಾವುದೇ ದಾಖಲೆ ಬಗ್ಗೆ ಎದ್ರುದಾರರು ವಿವಾದ ತೆಗೆಯದಿದ್ದರೆ ಆ ದಾಖಲೆಯ ಸಹಿ ರುಜುವಾತುಪಡಿಸುವ ಅಗತ್ಯವಿಲ್ಲ. ಆದರೆ, ಇದನ್ನು ರುಜು ಮಾಡುವುದು ನ್ಯಾಯಾಲಯಕ್ಕೆ ಬಿಟ್ಟ ವಿಚಾರ.


ಇದು ಕರ್ನಾಟಕ ಉಚ್ಚ ನ್ಯಾಯಾಲಯ ನೀಡಿದ ಮಹತ್ವದ ತೀರ್ಪು. ಮೊದಲನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಮಾಡಲಾದ ಮೇಲ್ಮನವಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಸೆಷನ್ಸ್ ನ್ಯಾಯಾಲಯದ ಕ್ರಮವನ್ನು ಎತ್ತಿಹಿಡಿದಿದೆ.

ಲಕ್ಷ್ಮಣ್ Vs ಕರ್ನಾಟಕ ರಾಜ್ಯ (ILR 1997 KAR 129 or 1997 CriLJ 1806) ಪ್ರಕರಣಕ್ಕೆ ಸಂಬಂಧಿಸಿದಂತೆ 1996ರ ನವೆಂಬರ್ 5ರಂದು ಈ ಮಹತ್ವದ ತೀರ್ಪು ನೀಡಿದೆ.

ಎಚ್. ನಾರಾಯಣ ಮತ್ತು ಮೈಖಲ್ ಸಲ್ದಾನ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ತೀರ್ಪು ನೀಡಿದ್ದು, ತನ್ನ ತಮ್ಮನನ್ನೇ ಕಬ್ಬಿಣದ ಸಲಾಖೆಯಿಂದ ಕೊಲೆ ಮಾಡಿದ ಆರೋಪಿಗೆ ಸಜೆ ನೀಡಿದ ಬೆಳಗಾವಿ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿಯಿತು.

ಹೆಚ್ಚಿನ ಮಾಹಿತಿ/ತೀರ್ಪಿನ ಪ್ರತಿಗಾಗಿ ಈ ಲಿಂಕ್ ಬಳಸಿ:

Ads on article

Advertise in articles 1

advertising articles 2

Advertise under the article