-->
ಉಪ ವಿಭಾಗಾಧಿಕಾರಿ ಸಹಿಯನ್ನೇ ಫೋರ್ಜರಿ ಮಾಡಿದ ವಕೀಲ: ಆರೋಪಿ ವಕೀಲನ ವಿರುದ್ಧ ಕ್ರಿಮಿನಲ್ ಕೇಸ್‌

ಉಪ ವಿಭಾಗಾಧಿಕಾರಿ ಸಹಿಯನ್ನೇ ಫೋರ್ಜರಿ ಮಾಡಿದ ವಕೀಲ: ಆರೋಪಿ ವಕೀಲನ ವಿರುದ್ಧ ಕ್ರಿಮಿನಲ್ ಕೇಸ್‌

ಉಪ ವಿಭಾಗಾಧಿಕಾರಿ ಸಹಿಯನ್ನೇ ಫೋರ್ಜರಿ ಮಾಡಿದ ವಕೀಲ: ಆರೋಪಿ ವಕೀಲನ ವಿರುದ್ಧ ಕ್ರಿಮಿನಲ್ ಕೇಸ್‌





ಜಮೀನಿನ ವಿವಾದ ಪ್ರಕರಣದಲ್ಲಿ ಉಪ ವಿಭಾಗಾಧಿಕಾರಿಯವರ ನಕಲಿ ಸಹಿ ಮಾಡಿ ವಕೀಲರೊಬ್ಬರು ಕ್ರಿಮಿನಲ್ ಕೇಸ್ ಹಾಕಿಸಿಕೊಂಡು ಕಾನೂನಿನ ಕುಣಿಕೆಗೆ ಸಿಕ್ಕಿ ಹಾಕಿಕೊಂಡಿದ್ದಾರೆ.


ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಬರದೇವನಾಳದ 5 ಎಕರೆ 32 ಗುಂಟೆ ಜಮೀನಿನಲ್ಲಿ ಈರಣ್ಣ ಮಲ್ಲಪ್ಪ ಮತ್ತು ಮಲ್ಲಪ್ಪ ಬಸಪ್ಪ ಎಂಬವರು 1954 ರಿಂದ 1997 ರವರೆಗೆ ನಿರಂತರ ಸಾಗುವಳಿ ಮಾಡುತ್ತಾ ಬಂದಿದ್ದರು. ಆದರೆ ಈ ಜಮೀನು ಸರಕಾರದ್ದು ಎಂದು ಹುಣಸಗಿ ತಹಶೀಲ್ದಾರರು ಆರ್‌ಟಿಸಿಯಲ್ಲಿ ಅವರ ಹೆಸರನ್ನು ರದ್ದುಪಡಿಸಿದ್ದರು.


ತಹಶೀಲ್ದಾರರ ಕ್ರಮವನ್ನು ಪ್ರಶ್ನಿಸಿ ಪಹಣಿಯಲ್ಲಿ ತಮ್ಮ ಹೆಸರು ಸೇರಿಸುವಂತೆ ವಕೀಲ ಶಾಂತಕುಮಾರ ಕೋರಿ ಅವರ ಮೂಲಕ ಉಪ ವಿಭಾಗಾಧಿಕಾರಿಯವರಿಗೆ ಈರಣ್ಣ ಮಲ್ಲಪ್ಪ ಮತ್ತು ಮಲ್ಲಪ್ಪ ಬಸಪ್ಪ ಮೇಲ್ಮನವಿ ಸಲ್ಲಿಸಿದರು.


ಈ ಕುರಿತು ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಎಸಿಯವರು ಹುಣಸಗಿ ತಹಶೀಲ್ದಾರರಿಗೆ ಸೂಚಿಸಿದ್ದರು. ಅದರಂತೆ ಇದು ಸರಕಾರದ ಜಮೀನು ಎಂದು ತಹಶೀಲ್ದಾರರು ವರದಿ ನೀಡಿದ್ದರು. ಈ ಆಧಾರದಲ್ಲಿ ಎಸಿಯವರು ಅರ್ಜಿದಾರರು ಸಲ್ಲಿಸಿದ್ದ ಮೇಲ್ಮನವಿಯನ್ನು ತಿರಸ್ಕರಿಸಿದ್ದರು.


ನಂತರ ಅರ್ಜಿದಾರರು ಈ ಆದೇಶವನ್ನು ವಕೀಲ ಶಂಕರ ಗುರು ಎಂಬವರಿಗೆ ತೋರಿಸಿದಾಗ, ತಾನು ಜಮೀನನ್ನು ತಮ್ಮ ಹೆಸರಲ್ಲಿ ಮಾಡಿಸಿ ಕೊಡುವುದಾಗಿ ಹೇಳಿದರು. ಆ ಬಳಿಕ, 2024ರ ಡಿಸೆಂಬರ್ 3ರಂದು ನಕಲಿ ಆದೇಶ ಪ್ರತಿ ತಯಾರಿಸಿದ್ದ ವಕೀಲ ಶಂಕರ ಗುರು, ಈ ಆದೇಶಕ್ಕೆ ಉಪ ವಿಭಾಗಾಧಿಕಾರಿಯವರ ಸಹಿ ಫೋರ್ಜರಿ ಮಾಡಿ ಅರ್ಜಿದಾರರಿಗೆ ನೀಡಿದ್ದರು.


ಈ ನಕಲಿ ದಾಖಲೆ ಸೃಷ್ಟಿಸಿ ಅರ್ಜಿದಾರರಿಂದ "ನಿಮ್ಮ ಹೆಸರಿನಲ್ಲಿ ಜಮೀನು ಮಾಡಿಸಿದ್ದೇನೆ" ಎಂದು ಹೇಳಿ ಎಂಟು ಲಕ್ಷ ನಗದು ಹಾಗೂ ಫೋನ್ ಪಡೆದುಕೊಂಡಿದ್ದರು. ಅರ್ಜಿದಾರರು ವಿಭಾಗಾಧಿಕಾರಿಯವರನ್ನು ಸಂಪರ್ಕಿಸಿದಾಗ, ತಮ್ಮ ಸಹಿ ಫೋರ್ಜರಿ ಆಗಿರುವುದು ತಿಳಿದುಬಂತು.


ಸುಳ್ಳು ಆದೇಶ ಪ್ರತಿಯನ್ನು ಅರ್ಜಿದಾರರ ಅರ್ಜಿದಾರರಿಗೆ ನೀಡಿರುವುದು ಎಸಿ ಅವರ ಗಮನಕ್ಕೆ ಬಂದಿತು ಕೂಡಲೇ

ತಕ್ಷಣ, ಪಕೀಲ ಶಂಕರ ಗುರು ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಎಸಿ ಅವರು ಸೂಚನೆ ನೀಡಿದ್ದು ಆತನ ವಿರುದ್ಧ ಪ್ರಕರಣ ದಾಖಲಿಸಿ, ಕಾನೂನಿನ ಕ್ರಮ ಜರುಗಿಸಲಾಗಿದೆ.


ಉಪ ವಿಭಾಗಾಧಿಕಾರಿ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಬಾಪು ಗೌಡ ಧೋರನಹಳ್ಳಿ ಅವರು ನೀಡಿದ ದೂರಿನ ಆಧಾರದಲ್ಲಿ ನಗರ ಪೊಲೀಸ್ ಠಾಣೆ ಪೋಲಿಸರು ವಕೀಲ ಶಂಕರ್‌ ಗುರು ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿದ್ದಾರೆ.



Ads on article

Advertise in articles 1

advertising articles 2

Advertise under the article