
ನೂತನ ಮುಖ್ಯ ನ್ಯಾಯಮೂರ್ತಿಯವರಿಗೆ ರಾಜ್ಯ ವಕೀಲರ ಪರಿಷತ್ತಿನಿಂದ ಗೌರವಾಭಿನಂದನೆ
ನೂತನ ಮುಖ್ಯ ನ್ಯಾಯಮೂರ್ತಿಯವರಿಗೆ ರಾಜ್ಯ ವಕೀಲರ ಪರಿಷತ್ತಿನಿಂದ ಗೌರವಾಭಿನಂದನೆ
ಭಾರತದ 52 ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಗೌರವಾನ್ವಿತ ಭೂಷಣ ರಾಮಕೃಷ್ಣ ಗವಾಯಿಯವರಿಗೆ ಅವರಿಗೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು (ಕೆಎಸ್ಬಿಸಿ) ಗೌರವಾಭಿನಂದನೆ ಸಲ್ಲಿಸಿದೆ.
ದೆಹಲಿಯಲ್ಲಿ ದೇಶದ ಸಮಸ್ತ ನ್ಯಾಯವಾದಿಗಳ ಪರವಾಗಿ ಗೌರವ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಆ ಸಮಾರಂಭದಲ್ಲಿ ಕರ್ನಾಟಕ ರಾಜ್ಯದ ಪರವಾಗಿ "ಕರ್ನಾಟಕ ರಾಜ್ಯ ವಕೀಲರ ಪರಿಷತ್ " ಅಧ್ಯಕ್ಷರೂ ಆಗಿರುವ ಬಾಗಲಕೋಟೆ ಜಿಲ್ಲೆ ಬಾದಾಮಿಯ ನ್ಯಾಯವಾದಿ ಎಸ್ ಎಸ್ ಮಿಟ್ಟಲಕೋಡ ಅವರು ಮುಖ್ಯ ನ್ಯಾಯಮೂರ್ತಿಗಳನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ವಕೀಲರ ಪರಿಷತ್ತಿನ ಅಧ್ಯಕ್ಷರಾದ ಮಿಟ್ಟಲಕೋಡ ಅವರು, ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳು, ಕೃಷ್ಣಾ ಮೇಲ್ದಂಡೆ ಯೋಜನೆ ಭೂಸ್ವಾಧೀನ ಪರಿಹಾರ, ಯೋಜನೆ ವಿಚಾರ ಕುರಿತು ಸನ್ಮಾನ್ಯ ಮುಖ್ಯ ನ್ಯಾಯಮೂರ್ತಿಗಳ ಗಮನ ಸೆಳೆದರು. ಈ ಬಗ್ಗೆ ಮಾನ್ಯ ನ್ಯಾಯಮೂರ್ತಿಗಳು ಸಕಾರಾತ್ಮಕವಾಗಿ ಸ್ಪಂದಿಸಿದರು.
ಬೌದ್ಧ ಧರ್ಮದ ಸಿದ್ದಾಂತದಿಂದ ಗಾಢವಾಗಿ ಪ್ರಭಾವಿತರಾಗಿರುವ ನ್ಯಾಯಮೂರ್ತಿಗಳು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳಾಗಿ ಅಧಿಕಾರ ವಹಿಸಿಕೊಂಡಿರುವುದು ಸಂತಸದ ಸಂಗತಿ. ಬುದ್ಧ ಪೂರ್ಣಿಮೆಯ ದಿನದಂದೇ ಅವರು ಅಧಿಕಾರ ವಹಿಸಿರುವುದು ಕೂಡ ಕಾಕತಾಳೀಯ.
ರಾಜ್ಯ ವಕೀಲರ ಪರವಾಗಿ ಗೌರವಾಭಿನಂದನೆ ಸಲ್ಲಿಸಿದ ಕೆಎಸ್ಬಿಸಿ ಅಧ್ಯಕ್ಷರು, ಕರ್ನಾಟಕ ರಾಜ್ಯದ ಹಳೆಯ ವ್ಯಾಜ್ಯಗಳ ತ್ವರಿತ ವಿಲೇವಾರಿ ಹಾಗೂ ನ್ಯಾಯಮೂರ್ತಿಗಳು ಮತ್ತು ನ್ಯಾಯಾಧೀಶರುಗಳ ಆದ್ಯತೆಯ ಮೇರೆಗೆ ನೇಮಕಾತಿ ಆಗುವಂತೆ ರಾಜ್ಯ ವಕೀಲರ ಪರಿಷತ್ತಿನಿಂದ ವಿನಂತಿಸಲಾಯಿತು.
ಈ ಅಭಿನಂದನಾ ಸಮಾರಂಭದಲ್ಲಿ ಸರ್ವೋಚ್ಛ ನ್ಯಾಯಾಲಯದ ಹಿರಿಯ ನ್ಯಾಯಮೂರ್ತಿಗಳಾದ ಸನ್ಮಾನ್ಯ ವಿಶ್ವನಾಥರವರು, ಭಾರತ ಸರಕಾರದ ಸಾಲಿಸಿಟರ್ ಜನರಲ್ ಸನ್ಮಾನ್ಯ ತುಷಾರ ಮೆಹ್ತಾರವರು, ಹೈಕೋರ್ಟ್ ನ್ಯಾಯಮೂರ್ತಿಗಳಾಧ ಸನ್ಮಾನ್ಯ ಪಿ ಬಿ ಭಜಂತ್ರಿ, ಭಾರತೀಯ ವಕೀಲರ ಪರಿಷತ್ತಿನ ಅಧ್ಯಕ್ಷರಾದ ಸನ್ಮಾನ್ಯ ಮನನ್ನ ಕುಮಾರ್ ಮಿಶ್ರಾ ರವರು, ಕೋ ಚೇರಮನ್ ಸನ್ಮಾನ್ಯ ಪ್ರಭಾಕರನ್, ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ಹಿರಿಯ ಸದಸ್ಯರೂ ಆದ ನ್ಯಾಯವಾದಿ ಎ ಎ ಮಗದುಮ್ ಹಾಗೂ ಬಿ ಆರ್ ಚಂದ್ರಮೌಳಿ, ಸರ್ವೋಚ್ಛ ನ್ಯಾಯಾಲಯದ ಅಸೋಸಿಯೇಷನ್ ಕಾರ್ಯಕಾರಿ ಸಮಿತಿ ಸದಸ್ಯರಾದ ಸಂಜಯ ನೂಲ್ವಿ, ಸುಪ್ರೀಂ ಕೋರ್ಟ್ ವಕೀಲರಾದ ಚಂದ್ರು ಪಾಟೀಲ್ ಮೊದಲಾದವರು ಉಪಸ್ಥಿತರಿದ್ದರು.