
ಚೆಕ್ ಅಮಾನ್ಯ ಪ್ರಕರಣ: ಆರೋಪಿ ಖುಲಾಸೆ ವಿರುದ್ಧ ದೂರುದಾರ ಪೂರ್ವಾನುಮತಿ ಇಲ್ಲದೆ ಮೇಲ್ಮನವಿ ಸಲ್ಲಿಸಬಹುದು- ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಚೆಕ್ ಅಮಾನ್ಯ ಪ್ರಕರಣ: ಆರೋಪಿ ಖುಲಾಸೆ ವಿರುದ್ಧ ದೂರುದಾರ ಪೂರ್ವಾನುಮತಿ ಇಲ್ಲದೆ ಮೇಲ್ಮನವಿ ಸಲ್ಲಿಸಬಹುದು- ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಚೆಕ್ ಅಮಾನ್ಯ ಪ್ರಕರಣಗಳಲ್ಲಿ ವಿಚಾರಣಾ ನ್ಯಾಯಾಲಯವು ಆರೋಪಿತರನ್ನು ಖುಲಾಸೆಗೊಳಿಸಿದರೆ, ದೂರುದಾರ ಸಂತ್ರಸ್ತರಾಗುತ್ತಾರೆ. ಅಂತಹ ಸಂದರ್ಭದಲ್ಲಿ ಫಿರ್ಯಾದಿಯವರು ಸೆಕ್ಷನ್ 372 CrPC ಅಡಿಯಲ್ಲಿ ಪೂರ್ವಾನುಮತಿ ಇಲ್ಲದೆಯೇ ಖುಲಾಸೆಯ ವಿರುದ್ಧ ಮೇಲ್ಮನವಿ ಸಲ್ಲಿಸಬಹುದು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಮತ್ತು ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠವು ಈ ಮಹತ್ವದ ತೀರ್ಪು ನೀಡಿದೆ.
ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್-1881, ಸೆಕ್ಷನ್ 138 ರ ಅಡಿಯಲ್ಲಿ ಚೆಕ್ ಬೌನ್ಸ್ ಪ್ರಕರಣಗಳಲ್ಲಿ ದೂರುದಾರರು ಕ್ರಿಮಿನಲ್ ಪ್ರೊಸೀಜರ್ ಕೋಡ್, 1973 (CrPC) ನ ಸೆಕ್ಷನ್ 2(wa) ರ ಅರ್ಥದಲ್ಲಿ "ಸಂತ್ರಸ್ತರು" ಮತ್ತು ಸೆಕ್ಷನ್ 378(4) ರ ಅಡಿಯಲ್ಲಿ ಪೂರ್ವಾನುಮತಿ ಪಡೆಯದೆ CrPCಯ ಸೆಕ್ಷನ್ 372 ರ ನಿಬಂಧನೆಯ ಅಡಿಯಲ್ಲಿ ಖುಲಾಸೆಯ ವಿರುದ್ಧ ಮೇಲ್ಮನವಿ ಸಲ್ಲಿಸಲು ಅರ್ಹರಾಗಿರುತ್ತಾರೆ ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.
ಪ್ರಕರಣ: M/s ಸೆಲೆಸ್ಟಿಯಮ್ ಫೈನಾನ್ಷಿಯಲ್ ವರ್ಸಸ್ Vs ಜ್ಞಾನಶೇಖರನ್ ಮತ್ತು ಇತರರು
(ಸುಪ್ರೀಂ ಕೋರ್ಟ್)