-->
ಕರ್ನಾಟಕ ರಾಜ್ಯ ವಕೀಲ ಪರಿಷತ್ತಿನಲ್ಲಿ ಉದ್ಯೋಗಾವಕಾಶ: ಕಾರ್ಯದರ್ಶಿ ಹುದ್ದೆ ಸಹಿತ ಹಲವು ಸ್ಥಾನಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ವಕೀಲ ಪರಿಷತ್ತಿನಲ್ಲಿ ಉದ್ಯೋಗಾವಕಾಶ: ಕಾರ್ಯದರ್ಶಿ ಹುದ್ದೆ ಸಹಿತ ಹಲವು ಸ್ಥಾನಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ವಕೀಲ ಪರಿಷತ್ತಿನಲ್ಲಿ ಉದ್ಯೋಗಾವಕಾಶ: ಕಾರ್ಯದರ್ಶಿ ಹುದ್ದೆ ಸಹಿತ ಹಲವು ಸ್ಥಾನಗಳಿಗೆ ಅರ್ಜಿ ಆಹ್ವಾನ





ಕರ್ನಾಟಕ ರಾಜ್ಯ ವಕೀಲ ಪರಿಷತ್ತು(ಕೆಎಸ್‌ಬಿಸಿ)ನಲ್ಲಿ ಉದ್ಯೋಗಾವಕಾಶ ಲಭ್ಯವಾಗಿದ್ದು, ಮೇ 20ರಂದು ಈ ಬಗ್ಗೆ ಪ್ರಕಟಣೆ ಹೊರಡಿಸಲಾಗಿದೆ.


ಪರಿಷತ್ತಿನ ಕಾರ್ಯದರ್ಶಿ ಹುದ್ದೆ ಸಹಿತ ಹಲವು ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದ್ದು, ಅರ್ಜಿ ಸಲ್ಲಿಸಲು ಜೂನ್ 15, 2025ರಂದು ಕೊನೆಯ ದಿನಾಂಕವಾಗಿದೆ.


ಹುದ್ದೆಗಳ ವಿವರ ಹೀಗಿದೆ..

ಕಾರ್ಯದರ್ಶಿ

ಪ್ರಭಾರ ಕಾರ್ಯದರ್ಶಿ

ಮ್ಯಾನೇಜರ್

ದ್ವಿತೀಯ ದರ್ಜೆ ಸಹಾಯಕ

ತಾಂತ್ರಿಕ ಸಿಬ್ಬಂದಿ

ಸ್ಟೆನೋಗ್ರಾಫರ್

ಅಟೆಂಡರ್

ಚಾಲಕರು



ಶೈಕ್ಷಣಿಕ ಹಾಗೂ ಇತರ ಅರ್ಹತೆಗಳು

ಕಾರ್ಯದರ್ಶಿ- ಕಾನೂನು ಪದವೀಧರರಾಗಿರಬೇಕು. ಕೆಎಸ್‌ಬಿಸಿಯಲ್ಲಿ ನೋಂದಾಯಿತ ವಕೀಲರಾಗಿರಬೇಕು. ಕನಿಷ್ಟ 10 ವರ್ಷಗಳ ಅನುಭವ ಇರಬೇಕು


ಪ್ರಭಾರ ಕಾರ್ಯದರ್ಶಿ- ಕಾನೂನು ಪದವೀಧರರಾಗಿರಬೇಕು. ಕೆಎಸ್‌ಬಿಸಿಯಲ್ಲಿ ನೋಂದಾಯಿತ ವಕೀಲರಾಗಿರಬೇಕು.


ಮ್ಯಾನೇಜರ್- ಬಿಕಾಂ ಪದವೀಧರರಾಗಿದ್ದು, ವಯಸ್ಸು 45ರಿಂದ 65ರ ಒಳಗಿರಬೇಕು. ಮ್ಯಾನೇಜರ್ ಹುದ್ದೆಯನ್ನು ನಿಭಾಯಿಸಿದ ಅನುಭವ ಇರಬೇಕು.


ದ್ವಿತೀಯ ದರ್ಜೆ ಸಹಾಯಕ- ಬಿಕಾಂ ಪದವೀಧರರಾಗಿದ್ದು, ಟ್ಯಾಲಿ, ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಮೂರು ವರ್ಷದ ಅನುಭವ ಇರಬೇಕು.


ತಾಂತ್ರಿಕ ಸಿಬ್ಬಂದಿ- ಎಂಸಿಎ, ಬಿಸಿಎ ಪದವೀಧರರಾಗಿಬೇಕು. ಹಾರ್ಡ್‌ವೇರ್ ಕಂಪ್ಯೂಟರ್ ಜ್ಞಾನ ಇರಬೇಕು.


ಸ್ಟೆನೋಗ್ರಾಫರ್

ಅಟೆಂಡರ್- ಪಿಯುಸಿ ಆಗಿರಬೇಕು.


ಚಾಲಕರು- ಪಿಯುಸಿ ಆಗಿರಬೇಕು. ಕನಿಷ್ಟ 5 ವರ್ಷದ ಅನುಭವ ಇರಬೇಕು.


ಅರ್ಜಿಯ ಪ್ರತಿಗಳನ್ನು ಕರ್ನಾಟಕ ಸ್ಟೇಟ್ ಬಾರ್ ಕೌನ್ಸಿಲ್, ಅಂಬೇಡ್ಕರ್ ವೀದಿ, ಬೆಂಗಳೂರು -560 001 ಇಲ್ಲಿಗೆ ಅರ್ಜಿ ಶುಲ್ಕದೊಂದಿಗೆ ಸಲ್ಲಿಸಬೇಕು. 

Ads on article

Advertise in articles 1

advertising articles 2

Advertise under the article