
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಅಧಿಕಾರ ವಹಿಸಿಕೊಂಡ ಅಂಜಾರಿಯಾ ಅವರಿಗೆ ರಾಜ್ಯ ವಕೀಲರ ಪರಿಷತ್ ಗೌರವ ಸನ್ಮಾನ
Sunday, June 1, 2025
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಅಧಿಕಾರ ವಹಿಸಿಕೊಂಡ ಅಂಜಾರಿಯಾ ಅವರಿಗೆ ರಾಜ್ಯ ವಕೀಲರ ಪರಿಷತ್ ಗೌರವ ಸನ್ಮಾನ
ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳಾಗಿ ಶ್ರೀ ಎನ್ವಿ ಅಂಜಾರಿಯಾ ಪ್ರಮಾಣವಚನ ಸ್ವೀಕರಿಸಿದರು.
ಕರ್ನಾಟಕ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳಾಗಿ ದಿನಾಂಕ 25/02/2024 ರಿಂದ 29/05/2025 ರ ವರೆಗೆ ಸೇವೆ ಸಲ್ಲಿಸಿದ ಗೌರವಾನ್ವಿತ ನ್ಯಾಯಾಮೂರ್ತಿಯವರನ್ನು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನಿಂದ ಗೌರವ ಸನ್ಮಾನ ಮಾಡಿ ಬೀಳ್ಕೊಡಲಾಯಿತು.
ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಎಸ್ ಎಸ್ ಮಿಟ್ಟಲಕೋಡ, ಸದಸ್ಯರಾದ ಶ್ರೀ ರಾಜಣ್ಣ ಆರ್, ಶ್ರೀ ಶಿವಕುಮಾರ್ ಎನ್, ಶ್ರೀ ದೇವರಾಜ್ ಎಮ್, ಶ್ರೀ ಗೌತಮ ಚಂದ್ ಎಸ್ ಎಫ್, ಹಾಗೂ ರೋಣ ತಾಲೂಕಿನ ವಕೀಲರಾದ ಶ್ರೀ ತಟ್ಟಿಮನಿ ರವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.