-->
ಹೊರಗುತ್ತಿಗೆ ಕಾರ್ಮಿಕರಿಗೆ ಸಿಹಿ ಸುದ್ದಿ: ಇಂಧನ ಇಲಾಖೆಯಲ್ಲಿ 13 ಸಾವಿರಕ್ಕೂ ಹೆಚ್ಚು ನೌಕರರ ಖಾಯಂ ನೇಮಕಾತಿ

ಹೊರಗುತ್ತಿಗೆ ಕಾರ್ಮಿಕರಿಗೆ ಸಿಹಿ ಸುದ್ದಿ: ಇಂಧನ ಇಲಾಖೆಯಲ್ಲಿ 13 ಸಾವಿರಕ್ಕೂ ಹೆಚ್ಚು ನೌಕರರ ಖಾಯಂ ನೇಮಕಾತಿ

ಹೊರಗುತ್ತಿಗೆ ಕಾರ್ಮಿಕರಿಗೆ ಸಿಹಿ ಸುದ್ದಿ: ಇಂಧನ ಇಲಾಖೆಯಲ್ಲಿ 13 ಸಾವಿರಕ್ಕೂ ಹೆಚ್ಚು ನೌಕರರ ಖಾಯಂ ನೇಮಕಾತಿ





ಹೊರಗುತ್ತಿಗೆ ಕಾರ್ಮಿಕರಿಗೆ ಇದು ನಿಜಕ್ಕೂ ಸಿಹಿ ಸುದ್ದಿ. ಇಂಧನ ಇಲಾಖೆಯ ಸ್ವಾಮ್ಯಕ್ಕೊಳಪಟ್ಟಿರುವ ಕೆಪಿಟಿಸಿಎಲ್‌ ಮತ್ತು ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ (ಎಸ್ಕಾಂ) 15-20 ವರ್ಷಗಳಿಂದ ಹೊರ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 13 ಸಾವಿರಕ್ಕೂ ಹೆಚ್ಚು ನೌಕರರ ಸೇವೆಯ ಕಾಯಂ ಅಥವಾ ಒಳ ಗುತ್ತಿಗೆಯಡಿ ನೇಮಕಾತಿಗೆ ಸಿದ್ಧತೆ ನಡೆದಿದೆ.


'ಹೊರಗುತ್ತಿಗೆ ಉದ್ಯೋಗಿಗಳ, ನ್ನು ಶೋಷಣೆಗೆ ಒಳಪಡಿಸಬಾರದು. ಆರ್ಥಿಕ ದುಃಸ್ಥಿತಿ ಅಥವಾ ಹುದ್ದೆ ಖಾಲಿ ಇಲ್ಲ ಎಂಬ ಕಾರಣ ನೀಡಿ ದೀರ್ಘ ಅವಧಿಗೆ ಸಕ್ರಮಾತಿ ನಿರಾಕರಿಸಬಾರದು' ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ಈ ತೀರ್ಪಿನ ಅನ್ವಯ, ಹೊರಗುತ್ತಿಗೆ ನೌಕರರ ಸೇವೆ ಕಾಯಂಗೊಳಿಸಲು ಅಥವಾ ಒಳ ಗುತ್ತಿಗೆಗೆ ಒಳಪಡಿಸಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.


ಇಂಧನ, ಆರೋಗ್ಯ, ಗಣಿ ಮತ್ತು ಭೂ ವಿಜ್ಞಾನ ಸೇರಿದಂತೆ ಕೆಲವು ಇಲಾಖೆಯಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಹೊರ ಗುತ್ತಿಗೆ ನೌಕರರಿದ್ದಾರೆ. ರಾಜ್ಯ ಸರ್ಕಾರ ಅನುಮೋದನೆ ನೀಡಿದ ನಂತರ ಕೆಪಿಟಿಸಿಎಲ್ ನಿರ್ದೇಶಕರ ಮಂಡಳಿ ಸೂಕ್ತ ಆದೇಶ ಹೊರಡಿಸಲಿದೆ ಎಂದು ಮೂಲಗಳು ತಿಳಿಸಿವೆ.


ಮೊದಲ ಹಂತದಲ್ಲಿ ಕೆಪಿಟಿಸಿಎಲ್ ಮತ್ತು ವಿವಿಧ ಎಸ್ಕಾಂಗಳಲ್ಲಿರುವ ಸ್ಟೇಷನ್ ಆಪರೇಟರ್, ಸ್ಟೇಷನ್ ಸಹಾಯಕ, ಗ್ಯಾಂಗ್ ಮನ್, ಮೀಟರ್ ರೀಡರ್, ಚಾಲಕರಿಗೆ ಸೇವಾ ಭದ್ರತೆ ಒದಗಿಸುವ ಉದ್ದೇಶದಿಂದ 'ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಲಿಮಿಟೆಡ್ (ಹೊರಗುತ್ತಿಗೆ ಸಿಬ್ಬಂದಿಯ ಕ್ರಮಬದ್ಧ ಗೊಳಿಸುವಿಕೆ) ಆದೇಶ- 2025'ರ ಕರಡು ಸಿದ್ದಗೊಂಡಿದೆ.


ಕರಡು ಅಧಿಸೂಚನೆಯಲ್ಲಿ ಏನಿದೆ?

ಕೆಪಿಟಿಸಿಎಲ್ ಮತ್ತು ಎಸ್ಕಾಂಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ನೇಮಕ ಗೊಂಡು ಅಪಾಯಕಾರಿ ಕೆಲಸಗಳನ್ನು ಮಾಡುತ್ತಿರುವ ಸ್ಟೇಷನ್ ಆಪರೇಟರ್, ಸ್ಟೇಷನ್ ಸಹಾಯಕ, ಗ್ಯಾಂಗ್‌ಮನ್, ಮೀಟರ್ ರೀಡರ್ ಮತ್ತು ಚಾಲಕರು ಮತ್ತು ಕನಿಷ್ಠ ಐದು ವರ್ಷ ನಿರಂತರವಾಗಿ ಕೆಲಸದಲ್ಲಿದ್ದು ಏಕಾಏಕಿ ವಜಾಗೊಂಡವರ ಸೇವೆ ಕಾಯಂಗೊಳಿಸುವ ಪ್ರಸ್ತಾವ ಈ ಕರಡು ಅಧಿಸೂಚನೆಯಲ್ಲಿದೆ.


ಇಂಧನ ಇಲಾಖೆ, ಕಾನೂನು ಇಲಾಖೆ ಮತ್ತು ಕಾರ್ಮಿಕ ಇಲಾಖೆಯ ಅಧಿಕಾರಿಯನ್ನು ಒಳಗೊಂಡ ಪರಿಶೀಲನಾ ಸಮಿತಿಯನ್ನು ರಚಿಸುವ ಪ್ರಸ್ತಾವವಿದ್ದು, ಈ ಸಮಿತಿಯು ವಿವಿಧ ವರ್ಗಗಳಲ್ಲಿ ಕಾರ್ಯನಿರ್ವಹಿಸುತ್ತಿ-ರುವ ಹೊರಗುತ್ತಿಗೆ ಸಿಬ್ಬಂದಿಯ ಜನ್ಮ ದಿನದ ದಾಖಲೆ, ಪ್ರಸ್ತುತ ಕಾರ್ಯ


ನಿರ್ವಹಿಸುತ್ತಿರುವ ಹುದ್ದೆಯ ವರ್ಗ, ಆ ಹುದ್ದೆಗೆ ನಿರ್ದಿಷ್ಟಪಡಿಸಿದ ಶೈಕ್ಷಣಿಕ ಅರ್ಹತೆಗಳ ಪ್ರಮಾಣಪತ್ರಗಳು, ಜಾತಿ ಪ್ರಮಾಣಪತ್ರ, ಉದ್ಯೋಗ ನೋಂದಣಿ ಕಾರ್ಡ್ (ಯಾವುದಾದರೂ ಇದ್ದರೆ), ಉದ್ಯೋಗಿ ಭವಿಷ್ಯ ನಿಧಿ ಖಾತೆ ಸಂಖ್ಯೆ, ದೈಹಿಕ ಸದೃಢತೆಯ ಪ್ರಮಾಣಪತ್ರ ಸೇರಿ ದಂತೆ ಅಗತ್ಯವಿರುವ ವಿವರ ಪಡೆದು ಪರಿಶೀಲಿಸಲಿದೆ.


ನಂತರ ಸಮಿತಿಯು, ವಿವಿಧ ವರ್ಗಗಳ ಹುದ್ದೆಗಳ ಅಡಿ ವಿವರಗಳನ್ನು ಸಲ್ಲಿಸಿದ ಹೊರಗುತ್ತಿಗೆ ಸಿಬ್ಬಂದಿಯ ಹೆಸರುಗಳನ್ನು ಹಾಲಿ ಇರುವ ವೃಂದ ಮತ್ತು ನೇಮಕಾತಿ ನಿಯಮಗಳ ಪ್ರಕಾರ ಪಟ್ಟಿ ಮಾಡಿ ನೇಮಕಾತಿ ಪ್ರಾಧಿಕಾರಕ್ಕೆ ಸಲ್ಲಿಸಬೇಕು. ಈ ಪಟ್ಟಿಯಲ್ಲಿ ರುವ ವಿವರಗಳು ತೃಪ್ತಿಕರವೆನಿಸಿದರೆ ನೇಮಕಾತಿ ಪ್ರಾಧಿಕಾರವು ನೌಕರರನ್ನು ಕ್ರಮಬದ್ಧಗೊಳಿಸುವ ಆದೇಶ ಹೊರಡಿಸಬಹುದು ಎಂದು ಕರಡು ಅಧಿಸೂಚನೆಯಲ್ಲಿ ವಿವರಿಸಲಾಗಿದೆ.


ಖಾಯಮಾತಿಗೆ ಷರತ್ತುಗಳು:

ಕಾರ್ಮಿಕರ ಹೊರಗುತ್ತಿಗೆ ಕಾಯಂಗೊಳಿಸಲು ಕೆಲ ಷರತ್ತುಗಳನ್ನು ಪ್ರಸ್ತಾಪಿಸಲಾಗಿದೆ. ಕಾಯಂಗೆ ಪರಿಗಣಿಸುವ ಹೊರಗುತ್ತಿಗೆ ಸಿಬ್ಬಂದಿ ವಯಸ್ಸು 58 ವರ್ಷ ಮೀರಬಾರದು. ಅಂತಹ ಸಿಬ್ಬಂದಿ ನೇಮಕಾತಿ ಪ್ರಾಧಿಕಾರದ ಅಡಿಯಲ್ಲಿ ನಿರಂತರ ಅವಧಿಯಿಂದ ಉದ್ಯೋಗದಲ್ಲಿರಬೇಕು. ಹುದ್ದೆಗಳ ವರ್ಗಗಳು, ಶೈಕ್ಷಣಿಕ ಅರ್ಹತೆ ಮತ್ತು ವೇತನ ಶ್ರೇಣಿಯನ್ನು ನಿಗಮ ಅಥವಾ ಸಂಬಂಧಿತ ಕಂಪನಿಯ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ನಿರ್ದಿಷ್ಟ ಪಡಿಸಿದಂತೆ ಕಾಲಕಾಲಕ್ಕೆ ಪರಿಷ್ಕರಿಸಲಾಗುವುದು. ಅಂತಹ ಸಿಬ್ಬಂದಿಯನ್ನು ಅವರು ಈಗಿರುವ ಸ್ಥಳದಲ್ಲಿಯೇ 'ಇರುವಂತೆಯೇ' ಕಾಯಂಗೊಳಿಸಲಾಗುವುದು ಎಂದೂ ಕರಡಿನಲ್ಲಿದೆ


ಹೀಗೆ ಕಾಯಂಗೊಂಡ ಹೊರಗುತ್ತಿಗೆ ಸಿಬ್ಬಂದಿಗೆ ಕಾಲಕ್ಕೆ ಕಾಲಕ್ಕೆ ಹೊರಡಿಸುವ ಆದೇಶಗಳ ಪ್ರಕಾರ ರಜೆ ಮತ್ತು ಇತರ ಸೇವಾ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಆದರೆ, ಕಾಯಂಗೊಳಿಸುವ ಮೊದಲು ಹೊರಗುತ್ತಿಗೆ ಆಧಾರದಲ್ಲಿ ಮಾಡಿದ ಕೆಲಸಕ್ಕೆ ಯಾವುದೇ ಪ್ರಯೋಜನಗಳನ್ನು ಪಡೆಯಲು ಅವಕಾಶ ಇಲ್ಲ ಎಂದೂ ಸ್ಪಷ್ಟ ಪಡಿಸಲಾಗಿದೆ.


ಕೆಪಿಟಿಸಿಎಲ್‌ ಮತ್ತು ಎಸ್ಕಾಂಗಳಲ್ಲಿ ಹಲವು ವರ್ಷಗಳಿಂದ ತಳಹಂತದಲ್ಲಿ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ಕಾರ್ಮಿಕರಿಗೆ ಸೇವಾ ಭದ್ರತೆ ಒದಗಿಸುವ ವಿಷಯದ ಕುರಿತಂತೆ ಅಧ್ಯಯನ ಮಾಡಲು ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯ ಅಧ್ಯಕ್ಷತೆಯಲ್ಲಿ 2022ರ ಡಿಸೆಂಬರ್ 3ರಂದು ಸಮಿತಿ ರಚಿಸಲಾಗಿತ್ತು. ಈ ಸಮಿತಿಯು 2023ರ ಆಗಸ್ಟ್ 24ರಂದು ಮೊದಲ ಸಭೆ ನಡೆಸಿ, ವಿಷಯ ಕುರಿತಂತೆ ಕೆಪಿಟಿಸಿಲ್‌ ಮತ್ತು ಎಸ್ಕಾಂಗಳಿಗೆ ಹಲವು ಸೂಚನೆಗಳನ್ನು ನೀಡಿತ್ತು. ಆದರೆ, ಸೇವಾ ಭದ್ರತೆ ಒದಗಿಸುವ ವಿಚಾರವು ನನೆಗುದಿಗೆ ಬಿದ್ದಿತ್ತು.


ಅಪಾಯಕಾರಿ ಕೆಲಸಗಳಿಗೆ ಹೊರಗುತ್ತಿಗೆಯಡಿ ನೇಮಕಗೊಳ್ಳುವ ಕೆಲಸಗಾರರಿಗೆ ಅಪಘಾತ ಸಂಭವಿಸಿದರೆ ವಿಮಾ ಸೌಲಭ್ಯವನ್ನು ಒದಗಿಸುವ ಬಗ್ಗೆ ಹೊರಗುತ್ತಿಗೆ ಸೇವೆ ಒದಗಿಸುವ ಏಜೆನ್ಸಿ ದಾರರಿಗೆ ಷರತ್ತು ವಿಧಿಸಲಾಗಿದೆ. ಆದರೆ, ಈ ಏಜೆನ್ಸಿಗಳು ಇದನ್ನು ಪಾಲಿಸುತ್ತಿಲ್ಲ ಎಂದು ಇಂಧನ ಇಲಾಖೆಯ ಅಧಿಕಾರಿ ಯೊಬ್ಬರು ತಿಳಿಸಿದರು.


Ads on article

Advertise in articles 1

advertising articles 2

Advertise under the article