-->
2026 ವರ್ಷದ ಕ್ಯಾಲೆಂಡರ್ ಪ್ರಕಟಿ: ಕೋರ್ಟ್‌ಗಳಿಗೆ ಹೆಚ್ಚುವರಿ ರಜೆ? ಸ್ಥಳೀಯ ಬೇಡಿಕೆಗೂ ಸಿಕ್ಕ ಮನ್ನಣೆ ನೀಡಿದ ಕರ್ನಾಟಕ ಹೈಕೋರ್ಟ್

2026 ವರ್ಷದ ಕ್ಯಾಲೆಂಡರ್ ಪ್ರಕಟಿ: ಕೋರ್ಟ್‌ಗಳಿಗೆ ಹೆಚ್ಚುವರಿ ರಜೆ? ಸ್ಥಳೀಯ ಬೇಡಿಕೆಗೂ ಸಿಕ್ಕ ಮನ್ನಣೆ ನೀಡಿದ ಕರ್ನಾಟಕ ಹೈಕೋರ್ಟ್

2026 ವರ್ಷದ ಕ್ಯಾಲೆಂಡರ್ ಪ್ರಕಟಿ: ಕೋರ್ಟ್‌ಗಳಿಗೆ ಹೆಚ್ಚುವರಿ ರಜೆ? ಸ್ಥಳೀಯ ಬೇಡಿಕೆಗೂ ಸಿಕ್ಕ ಮನ್ನಣೆ ನೀಡಿದ ಕರ್ನಾಟಕ ಹೈಕೋರ್ಟ್





ಕರ್ನಾಟಕ ಹೈಕೋರ್ಟ್ 2026 ನೇ ಇಸವಿಯ ಕ್ಯಾಲೆಂಡರ್ ಅನ್ನು ಪ್ರಕಟಿಸಿದ್ದು ಸಾರ್ವತ್ರಿಕ ರಜಾ ದಿನಗಳ ಕುರಿತು ರಾಜ್ಯ ಸರಕಾರವು ಪ್ರಕಟಿಸಿದ ಕ್ಯಾಲೆಂಡರ್ ಹಾಗೂ ಕರ್ನಾಟಕ ಹೈಕೋರ್ಟ್ ಪ್ರಕಟಿಸಿದ ಕ್ಯಾಲೆಂಡರ್ ಅವಲೋಕಿಸಿದಾಗ ಕರ್ನಾಟಕ ಹೈಕೋರ್ಟ್ ಈ ಕೆಳಗಿನ ಹಬ್ಬಗಳಿಗೆ ಹೆಚ್ಚುವರಿ ಸಾರ್ವತ್ರಿಕ ರಜೆಯನ್ನು ಘೋಷಿಸಿದೆ.


1. ವರಮಹಾಲಕ್ಷ್ಮಿ ವೃತ (21.8.2024)


2. ಶ್ರೀ ಕೃಷ್ಣ ಜನ್ಮಾಷ್ಟಮಿ

(4.9.2024)


ಮೇಲ್ಕಾಣಿಸಿದ ಹಬ್ಬಗಳ ಜೊತೆಗೆ ದಿನಾಂಕ 1.1.2026, 2.1.2026, 16.1.2026, 20.3.2026, 30.3.2026, 13.4.2026, ಮತ್ತು 9.11.2026 ಈ ಏಳು ದಿನಗಳನ್ನು ಸಾರ್ವತ್ರಿಕ ರಜಾ ದಿನಗಳೆಂದು ಘೋಷಿಸಲಾಗಿದೆ.


ಮೇಲ್ಕಾಣಿಸಿದ 9 ದಿನಗಳಂದು ರಾಜ್ಯ ಸರಕಾರವು ಸಾರ್ವತ್ರಿಕ ರಜೆಯನ್ನು ಘೋಷಿಸಿಲ್ಲ.


ಮೇಲ್ಕಾಣಿಸಿದ 9 ದಿನಗಳಿಗೆ ಸಾರ್ವತ್ರಿಕ ರಜೆಯನ್ನು ಘೋಷಿಸಿರುವುದರಿಂದ ಸದರಿ 9 ರಜಾ ದಿನಗಳನ್ನು ಸರಿದೂಗಿಸಲು 2026 ರ ಮೇ, ಅಕ್ಟೋಬರ್ ಮತ್ತು ಡಿಸೆಂಬರ್ ಈ ಮೂರು ತಿಂಗಳ ನಾಲ್ಕನೆಯ ಶನಿವಾರಗಳನ್ನು ಹೊರತು ಪಡಿಸಿ ಉಳಿದ 9 ತಿಂಗಳ ನಾಲ್ಕನೇ ಶನಿವಾರದಂದು ರಾಜ್ಯದ ಎಲ್ಲಾ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳಲ್ಲಿ ಕಲಾಪಗಳು ನಡೆಯಲಿವೆ.


ಕೈಲ್ ಮುಹೂರ್ತ (3.9.2026) ತುಲಾ ಸಂಕ್ರಮಣ (18.10.2026) ಮತ್ತು ಹುತ್ತರಿ ಹಬ್ಬ (26.11.2026) ಈ ಮೂರು ದಿನಗಳಂದು ಕೊಡಗು ಜಿಲ್ಲೆಯ ನ್ಯಾಯಾಲಯಗಳಿಗೆ ಸ್ಥಳೀಯ ರಜೆಯನ್ನು ಘೋಷಿಸಲಾಗಿದೆ.


ಶ್ರೀ ಕೃಷ್ಣ ಜನ್ಮಾಷ್ಟಮಿ (ಮೊಸರು ಕುಡಿಕೆ) ಹಬ್ಬವನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಬಹಳಷ್ಟು ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು ಉಭಯ ಜಿಲ್ಲೆಗಳ ಸರಕಾರಿ ನೌಕರರಿಗೆ ಸ್ಥಳೀಯವಾಗಿ ಸಾರ್ವತ್ರಿಕ ರಜೆಯನ್ನು ಘೋಷಿಸಬೇಕೆಂದು ಮಾಡಿದ ಮನವಿಗೆ ರಾಜ್ಯ ಸರಕಾರ ಇದುವರೆಗೂ ಸ್ಪಂದಿಸದಿದ್ದರೂ ಇದೀಗ ಹೈಕೋರ್ಟ್ ಸಾರ್ವತ್ರಿಕ ರಜೆಯನ್ನು ಘೋಷಿಸಿದ್ದು ಉಭಯ ಜಿಲ್ಲೆಗಳ ನ್ಯಾಯಾಂಗ ನೌಕರರಿಗೆ ಸಂತಸವನ್ನುಂಟು ಮಾಡಿದೆ.


ಹಾಗೆ ವರಮಹಾಲಕ್ಷ್ಮಿ ವೃತ ಆಚರಣೆಗಾಗಿ ಸಾರ್ವತ್ರಿಕ ರಜೆಯನ್ನು ಘೋಷಿಸುವ ಮೂಲಕ ರಾಜ್ಯದ ನ್ಯಾಯಾಂಗ ಇಲಾಖೆಯ ಮಹಿಳಾ ನೌಕರರ ಬಹು ದಿನಗಳ ಬೇಡಿಕೆಯನ್ನು ಈ ಬಾರಿ ಕೂಡ ಈಡೇರಿಸಿದಂತಾಗಿದೆ. ಸ್ವರ್ಣ ಗೌರಿ ವೃತ ಹಬ್ಬವು 13.9.2026ರ ಭಾನುವಾರದಂದು ಆಚರಿಸಲ್ಪಡುವುದು.


ಮಹಾ ಶಿವರಾತ್ರಿ, ಮಹರ್ಷಿ ವಾಲ್ಮೀಕಿ ಜಯಂತಿ, ಕರ್ನಾಟಕ ರಾಜ್ಯೋತ್ಸವ, ನರಕ ಚತುರ್ದಶಿ ಈ ಹಬ್ಬಗಳು ಭಾನುವಾರ ಬರುವುದರಿಂದ ಹಾಗೂ ಮಹಾಲಯ ಅಮಾವಾಸ್ಯೆ ಹಬ್ಬ ಎರಡನೇ ಶನಿವಾರದಂದು ಬರುವುದರಿಂದ ಸದರಿ ಐದು ದಿನಗಳ ರಜೆ ನಷ್ಟವಾಗಿದೆ.


ರಾಜ್ಯದ ಎಲ್ಲಾ ಸಿವಿಲ್ ನ್ಯಾಯಾಲಯಗಳಿಗೆ ಹಾಗೂ ಕೌಟುಂಬಿಕ ನ್ಯಾಯಾಲಯಗಳಿಗೆ ಈ ಕೆಳಗಿನ ಅವಧಿಯಲ್ಲಿ ಬೇಸಿಗೆ ರಜೆ, ದಸರಾ ರಜೆ ಹಾಗೂ ಚಳಿಗಾಲದ ರಜೆಗಳನ್ನು ಘೋಷಿಸಲಾಗಿದೆ.


ಬೇಸಿಗೆ ರಜೆ - 4.5.2026 ರಿಂದ 30.5.2026


ದಸರಾ ರಜೆ - 19.10.2026 ರಿಂದ 24.10.2026


ಚಳಿಗಾಲದ ರಜೆ - 21.12.2026 ರಿಂದ 31.12.2026


ರಾಜ್ಯದ ಕ್ರಿಮಿನಲ್ ನ್ಯಾಯಾಲಯಗಳು ಹಾಗೂ ಕಾರ್ಮಿಕ ನ್ಯಾಯಾಲಯಗಳು ಮೇಲ್ಕಾಣಿಸಿದ ರಜಾ ಅವಧಿಯಲ್ಲಿ ಕಾರ್ಯನಿರ್ವಹಿಸಲಿವೆ.


ದಿನಾಂಕ 1.1.2027 ರಂದು ರಾಜ್ಯದ ಎಲ್ಲಾ ನ್ಯಾಯಾಲಯಗಳಿಗೆ ಸಾರ್ವತ್ರಿಕ ರಜೆಯನ್ನು ಘೋಷಿಸಲಾಗಿದೆ.


*✍️ ಪ್ರಕಾಶ್ ನಾಯಕ್, ಹಿರಿಯ ಶಿರಸ್ತೇದಾರರು, ದ.ಕ. ನ್ಯಾಯಾಂಗ ಇಲಾಖೆ


Ads on article

Advertise in articles 1

advertising articles 2

Advertise under the article