-->
ಜಡ್ಜ್‌ಗಳ ನಿವೃತ್ತಿ ವಯಸ್ಸು ಹೆಚ್ಚಳ ಪ್ರಸ್ತಾಪ: ಆಡಳಿತಾತ್ಮಕವಾಗಿ ಬಗೆಹರಿಸಲು ಜಾರ್ಖಂಡ್ ಹೈಕೋರ್ಟ್ ಸಿಜೆಗೆ ಸುಪ್ರೀಂ ಕೋರ್ಟ್ ಮನವಿ

ಜಡ್ಜ್‌ಗಳ ನಿವೃತ್ತಿ ವಯಸ್ಸು ಹೆಚ್ಚಳ ಪ್ರಸ್ತಾಪ: ಆಡಳಿತಾತ್ಮಕವಾಗಿ ಬಗೆಹರಿಸಲು ಜಾರ್ಖಂಡ್ ಹೈಕೋರ್ಟ್ ಸಿಜೆಗೆ ಸುಪ್ರೀಂ ಕೋರ್ಟ್ ಮನವಿ

ಜಡ್ಜ್‌ಗಳ ನಿವೃತ್ತಿ ವಯಸ್ಸು ಹೆಚ್ಚಳ ಪ್ರಸ್ತಾಪ: ಆಡಳಿತಾತ್ಮಕವಾಗಿ ಬಗೆಹರಿಸಲು  ಜಾರ್ಖಂಡ್ ಹೈಕೋರ್ಟ್ ಸಿಜೆಗೆ ಸುಪ್ರೀಂ ಕೋರ್ಟ್ ಮನವಿ





ನ್ಯಾಯಾಂಗ ಅಧಿಕಾರಿಗಳ ನಿವೃತ್ತಿ ವಯಸ್ಸು ಹೆಚ್ಚಿಸುವ ಕುರಿತು ಮನವಿಯನ್ನು ಪರಿಗಣಿಸುವಂತೆ ಜಾರ್ಖಂಡ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಸುಪ್ರೀಂ ಕೋರ್ಟ್ ಮನವಿ


ಜಾರ್ಖಂಡ್ ಜಿಲ್ಲೆಯ ನ್ಯಾಯಾಧೀಶರ ನಿವೃತ್ತಿ ವಯಸ್ಸನ್ನು 60 ರಿಂದ 61 ವರ್ಷಗಳಿಗೆ ಹೆಚ್ಚಿಸುವಂತೆ ಸಲ್ಲಿಸಲಾಗಿದ್ದ ಮನವಿಯನ್ನು ಪರಿಗಣಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್, ಆ ವಿಷಯವನ್ನು ಆಡಳಿತಾತ್ಮಕವಾಗಿ ಪರಿಗಣಿಸುವಂತೆ ಜಾರ್ಖಂಡ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಮನವಿ ಮಾಡಿತು.


ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಲ್ಯ ಬಾಗ್ಚಿ ಹಾಗೂ ಆರ್. ಮಹಾದೇವನ್ ಅವರಿದ್ದ ವಿಭಾಗೀಯ ನ್ಯಾಯಪೀಠವು, ಜಿಲ್ಲಾ ಮ್ಯಾಜಿಸ್ಟ್ರೇಟ್ ಶ್ರೀ ರಂಜಿತ್ ಕುಮಾರ್ ಸಲ್ಲಿಸಿದ್ದ ಮನವಿಯನ್ನು ವಿಚಾರಣೆ ನಡೆಸಿತು.


ಜಾರ್ಖಂಡ್ ಸೇವಾ ನಿಯಮಗಳ ಪ್ರಕಾರ, ನ್ಯಾಯಾಂಗ ಅಧಿಕಾರಿಗಳ ನಿವೃತ್ತಿ ವಯಸ್ಸು 60 ವರ್ಷಗಳಾಗಿದೆ.

ತೆಲಂಗಾಣ ರಾಜ್ಯದಲ್ಲಿ ನ್ಯಾಯಾಂಗ ಅಧಿಕಾರಿಗಳ ನಿವೃತ್ತಿ ವಯಸ್ಸು ಹೆಚ್ಚಿಸಿರುವುದನ್ನು ಉಲ್ಲೇಖಿಸಿದ ವಕೀಲರು, “ನ್ಯಾಯಾಂಗ ಅಧಿಕಾರಿಗಳಲ್ಲಿ ಏಕರೂಪತೆಯನ್ನು ನಾವು ಕೋರುತ್ತಿದ್ದೇವೆ, ಏಕರೂಪತೆ ಇದ್ದಲ್ಲಿ ಅದು ಸಮಾನ ವರ್ಗವನ್ನು ಸೃಷ್ಟಿಸುತ್ತದೆ” ಎಂದು ವಾದಿಸಿದರು.


ಮುಂದುವರಿದು, "ಜಾರ್ಖಂಡ್ ಮತ್ತು ತೆಲಂಗಾಣ ರಾಜ್ಯಗಳ ನ್ಯಾಯಾಂಗ ಅಧಿಕಾರಿಗಳ ನಡುವೆ ಯಾವುದೇ ‘ಬುದ್ಧಿಗಮ್ಯ ವಿಭಿನ್ನತೆ’ ಇಲ್ಲ ಎಂದು ತಿಳಿಸಿದರು.


"ಆಲ್ ಇಂಡಿಯಾ ಜಡ್ಜಸ್ ಅಸೋಸಿಯೇಷನ್ ಪ್ರಕರಣ"ದಲ್ಲಿ ತೆಲಂಗಾಣ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯ ಮೇಲೆ ನೀಡಿದ್ದ ಹಿಂದಿನ ಆದೇಶವನ್ನು ವಕೀಲರು ಆಧಾರವಾಗಿ ಉಲ್ಲೇಖಿಸಿದರು. ಆ ಪ್ರಕರಣದಲ್ಲಿ, ಜಿಲ್ಲಾ ನ್ಯಾಯಾಧೀಶರ ನಿವೃತ್ತಿ ವಯಸ್ಸನ್ನು 61 ವರ್ಷಗಳಿಗೆ ಹೆಚ್ಚಿಸುವ ಕುರಿತು ಸ್ಪಷ್ಟೀಕರಣವನ್ನು ತೆಲಂಗಾಣ ಹೈಕೋರ್ಟ್ ಬೇಡಿಕೊಂಡಿತ್ತು.

ಆದರೆ ಮುಖ್ಯ ನ್ಯಾಯಮೂರ್ತಿ ಪ್ರತಿಕ್ರಿಯಿಸಿ, “ಏಕರೂಪತೆ ಇರಬೇಕಾದದ್ದು ನಿಜ; ಆದರೆ ನಿವೃತ್ತಿಗೆ ಕೆಲವೇ ದಿನಗಳ ಮೊದಲು ಸೇವಾ ಅವಧಿಯನ್ನು ಮುಂದುವರಿಸಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವುದು ಏಕರೂಪತೆ ಎಂದರ್ಥವಲ್ಲ” ಎಂದು ಅಭಿಪ್ರಾಯಪಟ್ಟರು.


ಇನ್ನು, ನಿವೃತ್ತಿಯ ನಂತರ ಪುನರ್‌ನೇಮಕ ನೀಡುವಂತೆ ನಿರ್ದೇಶನ ನೀಡಬೇಕೆಂಬುದು ಸಹ ಮನವಿಯಲ್ಲಿ ಕೇಳಲಾದ ಮತ್ತೊಂದು ಪರಿಹಾರವಾಗಿದ್ದು, ಇಂತಹ ಪುನರ್‌ನೇಮಕವನ್ನು 17 ಇತರೆ ರಾಜ್ಯಗಳು ಅನುಮತಿಸಿರುವುದಾಗಿ ವಕೀಲರು ನ್ಯಾಯಪೀಠದ ಮುಂದೆ ನಿವೇಸಿದಿಕೊಂಡರು.


ಇದು ಕಾರ್ಯನಿರ್ವಹಣಾ ವಿಭಾಗದ ನೀತಿ ನಿರ್ಧಾರ ಕ್ಷೇತ್ರಕ್ಕೆ ಸೇರಿರುವ ವಿಷಯ ಎಂದು ಪರಿಗಣಿಸಿದ ಪೀಠ, ಈ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿ ಕೆಳಗಿನಂತೆ ಆದೇಶ ನೀಡಿತು:


"ನಿವೃತ್ತಿ ವಯಸ್ಸನ್ನು 61 ಅಥವಾ 62 ವರ್ಷಗಳಿಗೆ ಹೆಚ್ಚಿಸಲು ಅರ್ಜಿದಾರರು ಕೋರುವ ನಿರ್ದೇಶನಕ್ಕೆ ನೀತಿ ನಿರ್ಧಾರದ ಅಗತ್ಯವಿದೆ. ತತ್ಪರಿಣಾಮವಾಗಿ ಸೇವಾ ನಿಯಮಗಳಲ್ಲಿ ತಿದ್ದುಪಡಿ ಮಾಡಬೇಕಾಗುತ್ತದೆ. ಕೆಲ ರಾಜ್ಯಗಳಲ್ಲಿ ನ್ಯಾಯಾಂಗ ಅಧಿಕಾರಿಗಳ ನಿವೃತ್ತಿ ವಯಸ್ಸು 61 ವರ್ಷಗಳಾಗಿದೆ; ಮುಖ್ಯವಾಗಿ ಆ ರಾಜ್ಯಗಳಲ್ಲಿ ಸರ್ಕಾರಿ ಅಧಿಕಾರಿಗಳ ನಿವೃತ್ತಿ ವಯಸ್ಸು 62 ವರ್ಷಗಳಾಗಿವೆ." ಎಂದು ಆದೇಶದಲ್ಲಿ ತಿಳಿಸಲಾಗಿದೆ.


"ಈ ವಿಷಯದ ಕುರಿತು ಸಮಗ್ರ ದೃಷ್ಟಿಕೋನವನ್ನು ಎಲ್ಲ ಪಾಲುದಾರರು ತೆಗೆದುಕೊಳ್ಳಬೇಕೆಂಬುದರಲ್ಲಿ ಯಾವುದೇ ಸಂಶಯವಿಲ್ಲ; ಮುಖ್ಯವಾಗಿ ಎಲ್ಲಾ ರಾಜ್ಯಗಳಲ್ಲಿ ನೇಮಕಾತಿ ಅಥವಾ ನಿವೃತ್ತಿ ವಯಸ್ಸು ಸೇರಿದಂತೆ ಸೇವಾ ಷರತ್ತುಗಳು ಸಮಾನವಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಆದರೆ ಈ ವಿಷಯವನ್ನು ನ್ಯಾಯಾಂಗ ಆದೇಶದ ಮೂಲಕ ಪರಿಹರಿಸುವುದು ಯುಕ್ತವಲ್ಲ. ಆದ್ದರಿಂದ, ಈ ರಿಟ್ ಅರ್ಜಿಯನ್ನು ಪರಿಗಣಿಸಲು ನಾವು ಇಚ್ಛಿಸುವುದಿಲ್ಲ."


ಆದಾಗ್ಯೂ, ಅರ್ಜಿದಾರರಿಗೆ ಜಾರ್ಖಂಡ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಮನವಿ ಸಲ್ಲಿಸುವ ಸ್ವಾತಂತ್ರ್ಯವನ್ನು ಪೀಠ ನೀಡಿದ್ದು, ರಾಜ್ಯ ಸರ್ಕಾರದೊಂದಿಗೆ ಪರಾಮರ್ಶಿಸಿ ಆಡಳಿತಾತ್ಮಕವಾಗಿ ಆ ಮನವಿಯನ್ನು ಪರಿಗಣಿಸಬಹುದೆಂದು ತಿಳಿಸಿದೆ.


"ಅರ್ಜಿದಾರರು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯನ್ನು ಸಂಪರ್ಕಿಸುವ ಸ್ವಾತಂತ್ರ್ಯವನ್ನು ನಾವು ನೀಡುತ್ತೇವೆ. ಅವರು ಇತರೆ ರಾಜ್ಯಗಳಿಂದ ಮಾಹಿತಿ ಸಂಗ್ರಹಿಸಿ, ನಿವೃತ್ತಿ ವಯಸ್ಸಿನ ನಿರ್ಧಾರದಲ್ಲಿ ಯಾವುದೇ ಅಸಮಾನತೆ ಕಂಡುಬಂದಲ್ಲಿ, ಆ ವಿಷಯವನ್ನು ರಾಜ್ಯ ಸರ್ಕಾರ ಮತ್ತು ಇತರೆ ಸಂಬಂಧಿತ ಅಧಿಕಾರಿಗಳೊಂದಿಗೆ ಆಡಳಿತಾತ್ಮಕವಾಗಿ ಕೈಗೆತ್ತಿಕೊಳ್ಳುವಂತೆ ವಿನಂತಿಸುತ್ತೇವೆ."


ಕಳೆದ ವರ್ಷದ ಮೇ ತಿಂಗಳಲ್ಲಿ, ಆಗಿನ ಮುಖ್ಯ ನ್ಯಾಯಮೂರ್ತಿ ನ್ಯಾಯಮೂರ್ತಿ ಬಿ.ಆರ್. ಗವಾಯಿ ಹಾಗೂ ನ್ಯಾಯಮೂರ್ತಿ ಎ.ಜಿ. ಮಸೀಹ್ ಅವರ ಪೀಠ, ಜಿಲ್ಲಾ ನ್ಯಾಯಾಧೀಶರ ನಿವೃತ್ತಿ ವಯಸ್ಸನ್ನು 61 ವರ್ಷಗಳಿಗೆ ಹೆಚ್ಚಿಸುವುದರಲ್ಲಿ ಯಾವುದೇ ಅಡೆತಡೆ ಇಲ್ಲವೆಂದು ಸ್ಪಷ್ಟಪಡಿಸಿ, ಮಧ್ಯಪ್ರದೇಶ ಹೈಕೋರ್ಟ್‌ಗೆ ಮೂರು ತಿಂಗಳೊಳಗೆ ಆಡಳಿತಾತ್ಮಕ ನಿರ್ಧಾರ ಕೈಗೊಳ್ಳುವಂತೆ ಸೂಚಿಸಿತ್ತು.


ಪ್ರಕರಣ ವಿವರಗಳು:

ರಂಜೀತ್ ಕುಮಾರ್ ವಿರುದ್ಧ ಜಾರ್ಖಂಡ್ ರಾಜ್ಯ

ಸುಪ್ರೀಂ ಕೋರ್ಟ್, W.P.(C) ಸಂಖ್ಯೆ 000034 / 2026

Ads on article

Advertise in articles 1

advertising articles 2

Advertise under the article