-->
ನಿವೃತ್ತ ನ್ಯಾಯಾಧೀಶ, ವಕೀಲ ಪುತ್ರನ ವಿರುದ್ಧ ವರದಕ್ಷಿಣೆ ಪ್ರಕರಣ: ಆರು ಮಂದಿಯ ವಿಶೇಷ ತನಿಖಾ ತಂಡ ರಚನೆ

ನಿವೃತ್ತ ನ್ಯಾಯಾಧೀಶ, ವಕೀಲ ಪುತ್ರನ ವಿರುದ್ಧ ವರದಕ್ಷಿಣೆ ಪ್ರಕರಣ: ಆರು ಮಂದಿಯ ವಿಶೇಷ ತನಿಖಾ ತಂಡ ರಚನೆ

ನಿವೃತ್ತ ನ್ಯಾಯಾಧೀಶ, ವಕೀಲ ಪುತ್ರನ ವಿರುದ್ಧ ವರದಕ್ಷಿಣೆ ಪ್ರಕರಣ: ಆರು ಮಂದಿಯ ವಿಶೇಷ ತನಿಖಾ ತಂಡ ರಚನೆ





ನಿವೃತ್ತ ನ್ಯಾಯಾಧೀಶರು ಹಾಗೂ ಅವರ ವಕೀಲ ಪುತ್ರನ ವಿರುದ್ಧ ವರದಕ್ಷಿಣೆ ಪ್ರಕರಣ ದಾಖಲಾಗಿದ್ದು, ಪ್ರಕರಣದ ಸಮಗ್ರ ತನಿಖೆಗೆ ಆರು ಮಂದಿಯ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿದೆ.


ಈ ಘಟನೆ ಭೋಪಾಲ್‌ನಲ್ಲಿ ನಡೆದಿದ್ದು, ನಿವೃತ್ತ ನ್ಯಾಯಧೀಶರಾದ ಗಿರಿಬಾಲಾ ಸಿಂಗ್ ಅವರ ಪುತ್ರ, ವಕೀಲರಾದ ಸಮರ್ಥ್ ಸಿಂಗ್ ಅವರ ಪತ್ನಿ ತ್ವಿಶಾ ಶರ್ಮಾ (33) ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನಲಾಗಿದೆ.


ತ್ವಿಶಾ ಶರ್ಮಾ ಅವರ ಮೃತದೇಹವು ಭೋಪಾಲ್‌ನ ಕತಾರ ಹಿಲ್ಸ್‌ ಪ್ರದೇಶದಲ್ಲಿರುವ ಅವರ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೇ 12ರಂದು ಪತ್ತೆಯಾಗಿತ್ತು. ಈ ಘಟನೆ ಹಿನ್ನೆಲೆಯಲ್ಲಿ ನಿವೃತ್ತ ನ್ಯಾಯಾಧೀಶರು ಹಾಗೂ ಅವರ ವಕೀಲ ಪುತ್ರನ ವಿರುದ್ಧ ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದೆ.


ಆರೋಪಿಗಳ ವಿರುದ್ಧದ ವರದಕ್ಷಿಣೆ ಕಿರುಕುಳ ಪ್ರಕರಣದ ತನಿಖೆ ನಡೆಸಲು ಆರು ಮಂದಿಯ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ ಎಂದು ಭೋಪಾಲ್‌ ಪೊಲೀಸರು ತಿಳಿಸಿದ್ದಾರೆ.


ಗಿರಿಬಾಲಾ ಹಾಗೂ ಸಮರ್ಥ್ ಅವರನ್ನು ಪತ್ತೆಹಚ್ಚಲು, ಬಂಧಿಸಲು ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ ಎಂದು ಎಸ್‌ಐಟಿ ಮುಖ್ಯಸ್ಥರಾಗಿರುವ ಸಹಾಯಕ ಪೊಲೀಸ್‌ ಆಯುಕ್ತ ರಜನೀಶ್ ಕಶ್ಯಪ್ ತಿಳಿಸಿದರು.


Ads on article

Advertise in articles 1

advertising articles 2

Advertise under the article

  

  

  

Join our WhatsApp Channel Powered By : Online Pudu