ನೋಂದಣಿ ಆಗದ ಉಯಿಲಿನ ನೈಜತೆ ಶಂಕಿಸಲಾಗದು: ಸುಪ್ರೀಂ ಕೋರ್ಟ್ ಪುನರುಚ್ಚಾರ
ನೋಂದಣಿ ಆಗದ ಉಯಿಲಿನ ನೈಜತೆ ಶಂಕಿಸಲಾಗದು: ಸುಪ್ರೀಂ ಕೋರ್ಟ್ ಪುನರುಚ್ಚಾರ
ನೋಂದಣಿಯಾಗಿಲ್ಲ ಎಂಬ ಕಾರಣಕ್ಕೆ ವಿಲ್ನ (ಉಯಿಲು) ನೈಜತೆಯನ್ನು ಅನುಮಾನದಿಂದ ನೋಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳಾದ ಉಜ್ಜಲ್ ಭುಯಾನ್ ಮತ್ತು ವಿಜಯ್ ಬಿಷ್ಟೋಯ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಉತ್ತರಾಧಿಕಾರಿಗಳನ್ನು ಹೊರಗಿಟ್ಟು ಉಯಿಲು ಮಾಡಿದ್ದರೂ ಅದನ್ನು ಅನುಮಾನಿಸಲಾಗದು. ಸಾಮಾನ್ಯ ಉತ್ತರಾಧಿಕಾರದ ಹಕ್ಕನ್ನು ಬದಲಾಯಿಸುವುದೇ ಉಯಿಲು ಮಾಡಿದವರ ಉದ್ದೇಶ ಆಗಿರುವ ಸಾಧ್ಯತೆ ಇದೆ ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ.
ಉಯಿಲನ್ನು (ವಿಲ್) ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು ಎಂಬ ಕಾನೂನೇನೂ ಇಲ್ಲ ಮುಂಬೈನ ಪ್ರತಿಷ್ಠಿತ ಕಂಪನಿಗಳ ಚಾರ್ಟಡ್್ರ ಅಕೌಂಟೆಂಟ್ ಆಗಿದ್ದ ಬಿ. ಶೀನಾ ನಾಯರಿ ಅವರು, ತಮ್ಮ ಕೃಷಿ, ಇತರ ಆಸ್ತಿಗಳನ್ನು ಕರ್ನಾಟಕದಲ್ಲಿರುವ ತಮ್ಮ ಸಹೋದರಿ ಲಕ್ಷ್ಮಿ ನಾಯರ್ತಿ ಅವರಿಗೆ 1983ರಲ್ಲಿ ಬಿಟ್ಟುಕೊಟ್ಟ ಉಯಿಲಿನ ಸಿಂಧುತ್ವವನ್ನು ನ್ಯಾಯಾಲಯವು ಎತ್ತಿಹಿಡಿದಿದೆ.