ಸಮಂಜಸ ಕಾರಣವಿಲ್ಲದೆ ನಿರಂತರವಾಗಿ ದಾಂಪತ್ಯ ಸಂಬಂಧ ನಿರಾಕರಣೆಯು ಮೌನಸಿಕ ಕ್ರೌರ್ಯ; ವಿಚ್ಚೇದನಕ್ಕೆ ಆಧಾರವಾಗುತ್ತದೆ- ಸುಪ್ರೀಂ ಕೋರ್ಟ್
ಸಮಂಜಸ ಕಾರಣವಿಲ್ಲದೆ ನಿರಂತರವಾಗಿ ದಾಂಪತ್ಯ ಸಂಬಂಧ ನಿರಾಕರಣೆಯು ಮೌನಸಿಕ ಕ್ರೌರ್ಯ; ವಿಚ್ಚೇದನಕ್ಕೆ ಆಧಾರವಾಗುತ್ತದೆ- ಸುಪ್ರೀಂ ಕೋರ್ಟ್
ಯಾವುದೇ ಸಮಂಜಸವಾದ ಕಾರಣವಿಲ್ಲದೆ, ನಿರಂತರವಾಗಿ ದಾಂಪತ್ಯ ಸಂಬಂಧ ನಿರಾಕರಿಸುವುದು ಮೌನಸಿಕ ಕ್ರೌರ್ಯ ಮತ್ತು ಇದು ವಿಚ್ಚೇದನಕ್ಕೆ ಆಧಾರವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ತೀರ್ಪುನೀಡಿದೆ.
ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿ ಸಂಜಯ್ ಕರೋಲ್ ಮತ್ತು ನ್ಯಾಯಮೂರ್ತಿ ಆಗಸ್ಟಿನ್ ಜಾರ್ಜ್ ಮಸೀಹ್ ಅವರಿದ್ದ ನ್ಯಾಯಪೀಠ "ST Vs VS (2026 INSC 620) ಪ್ರಕರಣದಲ್ಲಿ ತೀರ್ಪು ನೀಡಿದೆ.
ಮದುವೆಯಾಗಿ ಕೆಲವೇ ತಿಂಗಳು ದಾಂಪತ್ಯ ಜೀವನ ನಡೆಸಿದ್ದರೂ, ಇಬ್ಬರ ನಡುವೆ ವೈವಾಹಿಕ ಬಾಂಧವ್ಯ ಏರ್ಪಟ್ಟಿಲ್ಲ ಮತ್ತು ಎಲ್ಲ ಹಂತದಲ್ಲೂ ಅರ್ಜಿದಾರ ಪತ್ನಿ ವಿವಾಹ ವಿಚ್ಚೇದನದ ನಿರ್ಧಾರಕ್ಕೆ ಮುಂದಾಗಲಿಲ್ಲ.
ವೈವಾಹಿಕ ಸಂಬಂಧದಿಂದ ದೂರು ಉಳಿಯುವುದು ಮಾನಸಿಕ ಕ್ರೌರ್ಯ ಆಗಿದೆ. ಇದು ಹಿಂದೂ ವಿವಾಹ ಕಾಯ್ದೆ ಸೆಕ್ಷನ್ 13(1)ia ರ ಅಡಿಯಲ್ಲಿ ವಿಚ್ಚೇದನಕ್ಕೆ ಒಂದು ಆಧಾರವಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ.
2007ರಲ್ಲಿ ಸುಪ್ರೀಂ ಕೋರ್ಟ್ "ಸಮರ್ ಘೋಷ್ ವಿರುದ್ಧ ಜಯಾ ಘೋಷ್" ಪ್ರಕರಣದಲ್ಲಿ ನೀಡಿದ್ದ ತೀರ್ಪನ್ನು ಉಲ್ಲೇಖಿಸಿದ ನ್ಯಾಯಪೀಠ, ಗಂಡ ತನ್ನ ದಾಂಪತ್ಯ ಸಂಬಂಧವನ್ನು ಸ್ಥಾಪಿಸಲು ನಿರಂತರವಾಗಿ ನಿರಾಕರಿಸಿವುದುನ್ನು ಗಮನಿಸಿದೆ. ಮತ್ತು ಕೌಟುಂಬಿಕ ನ್ಯಾಯಾಲಯ ನೀಡಿದ್ದ ತೀರ್ಪನ್ನು ಎತ್ತಿ ಹಿಡಿಯಿತು.
persistent refusal of sexual reltation without reason is mental cruelty- Supre Court
Title of the Case: "ST Vs VS (2026 INSC 620)
Supreme Court: dated 02-06-2026